Webdunia - Bharat's app for daily news and videos

Install App

ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು ಎಂದ ನೆಟ್ಟಿಗರು

Webdunia
ಬುಧವಾರ, 26 ಜುಲೈ 2023 (10:49 IST)
ಆರೋಗ್ಯಕರ ಕೆಲಸದ ವಾತಾವರಣ, ತಕ್ಕಂಥ ಸಂಬಳ ಮತ್ತು ಸಾಮರ್ಥ್ಯ, ಕನಸುಗಳಿಗೆ ಪೂರಕವಾದ ಕೆಲಸ ಸಿಗದೇ ಇದ್ಧಾಗ. ಹೀಗಿದ್ದಾಗಲೂ ಕೆಲವರು ವೈಯಕ್ತಿಕ ಕಾರಣಗಳನ್ನು ಬರೆದು ರಾಜೀನಾಮೆ ಸಲ್ಲಿಸುತ್ತಾರೆ.

ಇನ್ನೂ ಕೆಲವರು ಕಚೇರಿಯಲ್ಲಿ ತಮಗಾದ ನೋವು ಬೇಸರವನ್ನು ವ್ಯಕ್ತಪಡಿಸಿ ರಾಜೀನಾಮೆ ಕೊಡುತ್ತಾರೆ. ಮತ್ತೂ ಕೆಲವರು ಕೊಡಬೇಕಾದುದನ್ನು ಶಾಲ್ನಲ್ಲಿ ಸುತ್ತಿ ಕೊಟ್ಟು, ಅಲ್ಲಿಯೂ ತಮ್ಮ ಸೃಜಶೀಲತೆ ಮೆರೆಯುತ್ತಾರೆ. ಇದೀಗ ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ಕೊನೆಯ ವರ್ಗಕ್ಕೆ ಸೇರಿದ್ದು.

ಸ್ವಿಗ್ಗಿ ಇನ್ಸ್ಟಾಮಾರ್ಟ್ ಸ್ವತಃ ಈ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದೆ. ಸಾಮಾನ್ಯವಾಗಿ ಅನೇಕರು ರಾಜೀನಾಮೆ ಪತ್ರ ಬರೆಯಲು ಟೆಂಪ್ಲೆಟ್ಗಾಗಿ ಗೂಗಲ್ನ ಮೊರೆ ಹೋಗುವುದುಂಟು.
ಪ್ರತಿಭೆ, ನಿಷ್ಠೆ, ಶ್ರದ್ಧೆಯುಳ್ಳ ಉದ್ಯೋಗಿ ಏನೇ ಮಾಡಿದರೂ ಅದಕ್ಕೆ ಸೃಜನಶೀಲ ಸ್ಪರ್ಶವಿದ್ದೆ ಇರುತ್ತದೆ. ಈ ಪತ್ರದಲ್ಲಿ ಇನ್ಸ್ಟಾನಲ್ಲಿ ಸಿಗುವ ನಿತ್ಯಬಳಕೆಯ ವಸ್ತುಗಳನ್ನು ಉಪಯೋಗಿಸಿ ರೀಬಸ್ ಸ್ಟೋರಿ ಮಾದರಿಯಲ್ಲಿ ಅರ್ಥಪೂರ್ಣವಾಗಿ ವಿನ್ಯಾಸ ಮಾಡಲಾಗಿದೆ. ಹೀಗಿದ್ದಮೇಲೆ ನೆಟ್ಟಿಗರಿಗೆ ಪ್ರತಿಕ್ರಿಯಿಸಲು ಉತ್ಸಾಹ ಉಕ್ಕದೇ ಇದ್ದೀತೇ?

ಎರಡು ದಿನಗಳ ಹಿಂದೆ ಇದನ್ನು ಟ್ವೀಟ್ ಮಾಡಲಾಗಿದ್ದು, ಸುಮಾರು 90,000 ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. 240 ಜನರು ರೀಟ್ವೀಟ್ ಮಾಡಿದ್ದಾರೆ. ಈ ಸೃಜನಶೀಲತೆ ಔಟ್ ಆಫ್ ದಿ ಬಾಕ್ಸ್ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾದ ಪತ್ರ ಎಂದು ಇನ್ನೊಬ್ಬರು. ಇವರ ರೆಸ್ಯೂಮ್ ಹೇಗಿದ್ದಿರಬೇಡ!? ಎಂದು ಕೇಳಿದ್ದಾರೆ ಮತ್ತೊಬ್ಬರು.

ಹಾಗೆ ನೋಡಿದರೆ ಈ ಉದ್ಯೋಗಿಯನ್ನು ಕಂಪೆನಿಯು ಕಳೆದುಕೊಳ್ಳಬಾರದು, ಏಕೆಂದರೆ ರಾಜೀನಾಮೆ ಪತ್ರವನ್ನೇ ಇಷ್ಟು ಸೃಜನಶೀಲತೆಯಿಂದ ಬರೆದಿದ್ದಾರೆ ಎಂದರೆ ಅವರೊಳಗಿನ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಗಮನಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments