ನೇಪಾಳದಲ್ಲಿ ಕಳೆದ ಮೂರು ದಿನಗಳಿಂದ ಭೂಕಂಪನ ಎಂಬ ಹೆಮ್ಮಾರಿ ರುದ್ರತಾಂಡವವಾಡುತ್ತಿದ್ದು, ಅಲ್ಲೆಗೆ ತೆರಳಿದ್ದ 200ಕ್ಕೂ ಅಧಿಕ ಮಂದಿ ಕನ್ನಡಿಗರನ್ನು ಭಾರತೀಯ ರಕ್ಷಣಾ ತಂಡ ರಕ್ಷಿಸಿದೆ.
ಮೂಲಗಳ ಪ್ರಕಾರ, ಒಂದೇ ಕುಟುಂಬದ 12 ಮಂದಿ ಸೇರಿ ಒಟ್ಟು 19 ಮಂದಿ ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಈ ಎಲ್ಲರೂ ಕೂಡ ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾ ನಿಲ್ದಾಣದಲ್ಲಿ ಇಳಿದರು. ಇವರಲ್ಲದೆ ಇತರೆ 150 ಮಂದಿ ಕನ್ನಡಿಗರನ್ನು ನೇಪಾಳದಿಂದ ವಿಶೇಷ ವಿಮಾನದ ಮೂಲಕ ರಾಜಧಾನಿ ನವದೆಹಲಿಗೆ ಕರೆತರಲಾಗಿದ್ದು, ಅಲ್ಲಿನ ಕರ್ನಾಟಕ ಭವನದಲ್ಲಿ ಅವಕಾಶ ತಂಗಲು ಮಾಡಿಕೊಲಾಗಿದೆ. ಈ ಎಲ್ಲರೂ ಕೂಡ ಇಂದು ಕರ್ನಾಟಕಕ್ಕೆ ತಲುಪಲಿದ್ದಾರೆ ಎನ್ನಲಾಗಿದೆ.
ಇವರಲ್ಲಿ ಈಗಾಗಲೇ 40 ಮಂದಿಯ ತಂಡ ನಿನ್ನೆ ರಾತ್ರಿಯೇ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದು, ಬೆಂಗಳೂರು ತಲುಪಲಿದ್ದಾರೆ ಎನ್ನಲಾಗಿದ್ದು, ಇಲ್ಲಿಯವರೆಗೆ ಕರ್ನಾಟಕ ರಾಜ್ಯದ 200 ಮಂದಿ ವಾಪಾಸ್ ಆಗಿದ್ದಾರೆ ಎಂದು ವರದಿ ತಿಳಿದು ಬಂದಿದೆ.