Webdunia - Bharat's app for daily news and videos

Install App

ರಾಷ್ಟ್ರ ಲಾಂಛನ ವಿವಾದ ಕೇಂದ್ರ ಸಚಿವರು ತಿರುಗೇಟು

Webdunia
ಬುಧವಾರ, 13 ಜುಲೈ 2022 (14:19 IST)
ಹೊಸ ಸಂಸತ್‌ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿದ್ದ ರಾಷ್ಟ್ರ ಲಾಂಛನ ಕುರಿತು ವಿಪಕ್ಷಗಳು ಅಪಸ್ವರ ಎತ್ತಿದ್ದು, ಮೋದಿ ಸರ್ಕಾರ ಲಾಂಛನ ವನ್ನು ವಿರೂಪ ಮಾಡಿದೆ ಎಂದು ಆರೋಪಿಸಿದೆ.
 
ಮೊದಲಿಗೆ ಪ್ರಧಾನಮಂತ್ರಿ, ಲೋಕಸಭೆಯ ರಚನೆಯನ್ನು ಅನಾವರಣ ಮಾಡುವ ಹಿಂದಿನ ಸಾಂವಿಧಾನಿಕ ಬದ್ಧತೆಯನ್ನು ಪ್ರಶ್ನೆ ಮಾಡಿದ್ದ ವಿರೋಧ ಪಕ್ಷಗಳುರಾಷ್ಟ್ರಲಾಂಛನವನ್ನು ಮೋದಿ ಸರ್ಕಾರ ವಿರೂಪ ಮಾಡಿದೆ ಎಂದು ಆರೋಪಿಸಿದೆ.
ಸಾರಾನಾಥದ ಅಶೋಕ ಸ್ತಂಭದ ಮೇಲಿರುವ ಸಿಂಹಗಳು ಸೌಮ್ಯ ಹಾಗೂ ವಿನಮ್ರವಾಗಿದ್ದವು, ಆದರೆ, ಸಂಸತ್‌ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರ ಲಾಂಛನದಲ್ಲಿನ ಸಿಂಹಗಳ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು, ಆಕ್ರಮಣಕಾರಿಯಾಗಿ ಘರ್ಜನೆ ಮಾಡುತ್ತಿರುವಂತಿದೆ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡಿವೆ.
 
ಇದರ ಬೆನ್ನೆಲ್ಲೇ ಬಿಜೆಪಿ ಕೂಡ ವಿರೋಧ ಪಕ್ಷಗಳ ಟೀಕೆಗೆ ಅಷ್ಟೇ ಬಲಿಷ್ಠವಾಗಿ ಉತ್ತರ ನೀಡಿದೆ. ಸಂವಿಧಾನವನ್ನು ಮುರಿದ ವ್ಯಕ್ತಿಗಳಿಂದ ರಾಷ್ಟ್ರ ಲಾಂಛನದ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
 
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಸಾರನಾಥದಲ್ಲಿರುವ ಸಿಂಹಗಳು ಹಾಗೂ ಸಂಸತ್ ಭವನದ ಸಿಂಹಗಳ ನಡುವಿನ ವ್ಯತ್ಯಾಸಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ಪ್ರಕಟಿಸಿದ್ದಾರೆ.
'ಇದು ದೃಷ್ಟಿಕೋನದ ಪ್ರಜ್ಞೆ. ನಮ್ಮ ಎದುರಿನ ಯಾವುದೇ ವಸ್ತುವಿನ ಸೌಂದರ್ಯ ಹೇಗಿರಲಿದೆ ಎನ್ನುವುದು ನಾವು ನೋಡುವ ಕಣ್ಣುಗಳಲ್ಲಿ ಇರುತ್ತದೆ. ಅದೇ ರೀತಿ ಶಾಂತ ಹಾಗೂ ಕೋಪವೂ ಕೂಡ ಹೌದು. ಸಾರಾನಾಥದ ಅಶೋಕ ಸ್ತಂಭದಲ್ಲಿರುವ ರಾಷ್ಟ್ರ ಲಾಂಛನ ಕೇವಲ 1.6 ಮೀಟರ್‌ ಎತ್ತರವಿದೆ. ಇನ್ನು ಹೊಸ ಸಂಸತ್‌ ಭವನದ ಮೇಲೆ ಇಡಲಾಗಿರುವ ರಾಷ್ಟ್ರ ಲಾಂಛನ ಬರೋಬ್ಬರಿ 6.5 ಮೀಟರ್‌ ಎತ್ತರವಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು

ಮುಂದಿನ ಸುದ್ದಿ
Show comments