Select Your Language

Notifications

webdunia
webdunia
webdunia
webdunia

ಹೆಬ್ಬಾಳದಲ್ಲಿ ನಾರಾಯಣ ಸ್ವಾಮಿ ಭರ್ಜರಿ ಜಯ: ಷರೀಫ್‌ಗೆ ಮುಖಭಂಗ

ಹೆಬ್ಬಾಳದಲ್ಲಿ ನಾರಾಯಣ ಸ್ವಾಮಿ ಭರ್ಜರಿ ಜಯ: ಷರೀಫ್‌ಗೆ ಮುಖಭಂಗ
ಬೆಂಗಳೂರು: , ಮಂಗಳವಾರ, 16 ಫೆಬ್ರವರಿ 2016 (12:44 IST)
ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್  ಹೀನಾಯ ಸೋಲನುಭವಿಸುವ ಮೂಲಕ ಅವರ ತಾತ ಹಿರಿಯ ಮುಖಂಡ ಜಾಫರ್‌ ಷರೀಫ್ ಅವರಿಗೆ ಭಾರೀ ಮುಖಭಂಗವಾಗಿದೆ. ಈ ಬಾರಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು.

ಜಾಫರ್ ಷರೀಫ್ ತಮ್ಮ ಮೊಮ್ಮಗನಿಗೆ ಟಿಕೆಟ್ ಪಡೆಯುವುದಕ್ಕೆ ಖರ್ಗೆ ಅವರಿಂದ ಹಿಡಿದು ಹೈಕಮಾಂಡ್‌ವರೆಗೆ ಲಾಬಿ ನಡೆಸಿ ಟಿಕೆಟ್ ಗಿಟ್ಟಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹೆಬ್ಬಾಳ ಟಿಕೆಟ್ ಹಂಚಿಕೆಯಲ್ಲಿ  ಉಂಟಾದ ಗೊಂದಲದಿಂದಾಗಿ ಮತ್ತು ಒಳಜಗಳಗಳಿಂದಾಗಿ ರೆಹಮಾನ್ ಸೋಲನುಭವಿಸುವ ಮೂಲಕ ಜಾಫರ್ ಮುಖಭಂಗ ಅನುಭವಿಸಿದ್ದಾರೆ.  ದೇವದುರ್ಗದಲ್ಲಿ ಬಿಜೆಪಿ ಶಿವನಗೌಡ ನಾಯಕ್ 72645 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವನ್ನು ಗಳಿಸಿದ್ದಾರೆ.

 ಕಾಂಗ್ರೆಸ್‌ನ ರಾಜಶೇಖರ ನಾಯಕ್ ಅವರಿಗೆ ಅನುಕಂಪದ ಅಲೆ ಕೂಡ ನೆರವಿಗೆ ಬರಲಿಲ್ಲ.  ಮಾಜಿ ಶಾಸಕ ವೆಂಕಟೇಶ್ ನಾಯಕ್ ಮೃತಪಟ್ಟ ಬಳಿಕ ದೇವದುರ್ಗ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಆದರೆ ಅವರ ಪುತ್ರ ರಾಜಶೇಖರ್ ಕಡೆ ಅನುಕಂಪದ ಅಲೆ ಬೀಸದೇ 55, 768 ಮತಗಳನ್ನು ಗಳಿಸಿ ಸೋಲನುಭವಿಸಿದ್ದಾರೆ. ಜೆಡಿಎಸ್ ಕರಿಯಮ್ಮ 9156 ಮತಗಳನ್ನು ಗಳಿಸಿದ್ದಾರೆ. 

Share this Story:

Follow Webdunia kannada