Webdunia - Bharat's app for daily news and videos

Install App

ಮಂಡ್ಯದ ನಾರಾಯಣಗೌಡರ ಪತ್ನಿ ಹೀಗಾ ಮಾಡಿಕೊಳ್ಳೋದು?

Webdunia
ಮಂಗಳವಾರ, 14 ಜನವರಿ 2020 (18:46 IST)
ನಾರಾಯಣಗೌಡರ ಧರ್ಮಪತ್ನಿ ಮಾಡಬಾರದ ಕೆಲಸ ಮಾಡಿ ಜೀವ ಕಳೆದುಕೊಂಡಿದ್ದಾರೆ.

ಮಂಡ್ಯದ ಗೋವಿಂದೇಗೌಡನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕ ರೈತ ಮಹಿಳೆ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಗೋವಿಂದೇಗೌಡನಕೊಪ್ಪಲು ಗ್ರಾಮದ  ನಾರಾಯಣಗೌಡರ ಪತ್ನಿ ರತ್ನಮ್ಮ(45) ಆತ್ಮಹತ್ಯೆ ಶರಣಾದ ರೈತ ಮಹಿಳೆ. ಮೃತ ರತ್ನಮ್ಮ ಅವರಿಗೆ ಸುಮಾರು 45ವರ್ಷ ವಯಸ್ಸಾಗಿತ್ತು. ಮೃತ ಮಹಿಳೆಯ ಕುಟುಂಬಕ್ಕೆ ಹೊಸಹೊಳಲು ಗ್ರಾಮ ಎಲ್ಲೆಗೆ ಸೇರಿದ ಸರ್ವೆ ನಂ.109ರಲ್ಲಿ  ಎರಡು ಎಕರೆ ಭೂಮಿ ಇದ್ದು ಅದು ಬೀಳು ಬಿದ್ದಿತ್ತು.

ಈ ಭೂಮಿಯನ್ನು ರಿಸ್ಟೋರ್ ಮಾಡಿಸಿಕೊಳ್ಳಲು ಹಲವು ಮಹಿಳಾ  ಸ್ವಸಹಾಯ ಸಂಘಗಳಲ್ಲಿ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್  ಬ್ಯಾಂಕ್‌ ಗಳಲ್ಲಿ  ಸೇರಿ ಒಟ್ಟು ಸುಮಾರು ಐದಾರು ಲಕ್ಷ ರೂ.ಗಳ  ಸಾಲವನ್ನು ಪಡೆದುಕೊಂಡಿದ್ದರು.  ಆದರೂ  ಭೂಮಿಯ ದಾಖಲೆಗಳು ಅವರ ಕುಟುಂಬದ ಹೆಸರಿಗೆ  ಆಗಿರಲಿಲ್ಲ.  
ಈ ನಡುವೆ ಸಾಲ ನೀಡಿದ ವಿವಿಧ ಸಂಘಗಳ ಕಂತಿನ ಹಣವನ್ನು ಪಾವತಿಸಲು ತೊಂದರೆಯಾಗಿತ್ತು. 

ಎರಡೂ ಕಾರಣದಿಂದ ಮನನೊಂದು ಬೆಳಿಗ್ಗೆ ತಮ್ಮ  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments