Webdunia - Bharat's app for daily news and videos

Install App

ವಿಶ್ವವಿಖ್ಯಾತ ಮೈಸೂರು ದಸರಾ: ಅರ್ಜುನ ತಂಡಕ್ಕೆ ಭಾರ ಹೊರುವ ತಾಲೀಮು ಶುರು

Webdunia
ಶನಿವಾರ, 2 ಸೆಪ್ಟಂಬರ್ 2017 (12:27 IST)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಗಜಪಡೆಗಳಿಗೆ ತಾಲೀಮು ಜೋರಾಗಿ ನಡೆಯುತ್ತಿದೆ.

ಮೊದಲ ತಂಡದಲ್ಲಿ ಬಂದ ಅರ್ಜುನ ನೇತೃತ್ವದ 7 ಆನೆಗಳು ಸೇರಿ 15 ಆನೆಗಳಿಗೆ ನಿನ್ನೆಯಿಂದ ಭಾರ ಹೊರುವ ತಾಲೀಮು ಶುರುವಾಗಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ ಸುಮಾರು 400 ಕೆಜಿ ಭಾರ ಹೊತ್ತು ಸಾಗಿದ.

ಭಾರ ಹೊತ್ತ ಅರ್ಜುನ ಎರಡನೇ ತಾಲೀಮು ಆರಂಭಿಸಿದ. ಅರ್ಜುನನಿಗೆ ಕುಮ್ಕಿ ಆನೆಗಳಾದ ವರಲಕ್ಷ್ಮಿ ಹಾಗೂ ಕಾವೇರಿ ಸಾಥ್ ನೀಡಿದರು. ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನ ಮತ್ತು ತಂಡ ಸಾಲಾಗಿ ನಗರದಲ್ಲಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಅರ್ಜುನನ ಬೆನ್ನಮೇಲೆ ಗಾದಿ ಮತ್ತು ನಮ್ದ ಇಟ್ಟು ತೊಟ್ಟಿಲು ಕಟ್ಟಿ, ಅದರಲ್ಲಿ ಸುಮಾರು 400 ಕೆಜಿಯಷ್ಟು ಮರಳು ಮೂಟೆಗಳನ್ನ ಹಾಕಿ ನಗರದಲ್ಲಿ ತಾಲೀಮು ಆರಂಭಿಸಲಾಗಿದೆ. ಅರ್ಜುನ , ಬಲರಾಮ, ಅಭಿಮನ್ಯು, ಗಜೇಂದ್ರನಿಗೆ ಈ ಬಾರಿ ಭಾರ ಹೊರುವ ತಾಲೀಮು ನೀಡಲಾಗ್ತಿದೆ. 15 ದಿನದ ಬಳಿಕ 750 ಕೆಜಿ ತೂಕದ ಮರದ ಅಂಬಾರಿ ಹೊರುವ ತಾಲೀಮು ಶುರುವಾಗಲಿದೆ. ಈ ಬಾರಿ 2 ಹೊಸ ಆನೆಗಳು ಸೇರ್ಪಡೆಯಾಗಿದ್ದು, ಎಲ್ಲಾ ಆನೆಗಳು ಸಹ ಸೌಮ್ಯವಾಗಿ ವರ್ತಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments