Select Your Language

Notifications

webdunia
webdunia
webdunia
webdunia

ದಸರಾ ಉತ್ಸವಕ್ಕೆ ಗಿರೀಶ್ ಕಾರ್ನಾಡ್; ಜೆಡಿಎಸ್ ವಿರೋಧ

ದಸರಾ ಉತ್ಸವಕ್ಕೆ ಗಿರೀಶ್ ಕಾರ್ನಾಡ್; ಜೆಡಿಎಸ್ ವಿರೋಧ
ಮೈಸೂರು , ಶುಕ್ರವಾರ, 1 ಆಗಸ್ಟ್ 2014 (13:29 IST)
ದಸರಾ ಉತ್ಸವಕ್ಕೆ ಚಿತ್ರನಟ ಗಿರೀಶ್ ಕಾರ್ನಾಡ್ ಅವರ ಆಯ್ಕೆಯನ್ನು ಮೈಸೂರು ಜಿಲ್ಲೆಯ ಜೆಡಿಎಸ್ ಘಟಕ ವಿರೋಧ ವ್ಯಕ್ತಪಡಿಸಿದೆ.
 
ಕಾರ್ನಾಡ್‌ ನಾಸ್ತಿಕರಾಗಿದ್ದರಿಂದ ಅವರಿಗೆ ದೇವರ ಮೇಲೆ ಭಯ ಭಕ್ತಿ ಇಲ್ಲವಾದ್ದರಿಂದ ಅಂತಹ ವ್ಯಕ್ತಿಯಿಂದ ನಾಡದೇವಿಯ ಉದ್ಘಾಟನೆ ಸಮಾರಂಭಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ
 
ಮೈಸೂರು ದಸರಾ ಉದ್ಘಾಟಕರನ್ನು ಕೂಡಲೇ ಬದಲಿಸಿ ಆಸ್ತಿಕರಾದ ಮಹಾನ್ ಮುತ್ಸದ್ದಿಯನ್ನು ಆಯ್ಕೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದೆ.
 
ಗಿರೀಶ್ ಕಾರ್ನಾಡ್ ಅವರನ್ನು ಬದಲಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಜೆಡಿಎಸ್ ಜಿಲ್ಲಾ ಘಟಕ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

Share this Story:

Follow Webdunia kannada