Select Your Language

Notifications

webdunia
webdunia
webdunia
webdunia

ಸಿಎಂ ಬಳಿ ಇರೋದು ನನ್ನ ಕಳುವಾದ ವಾಚ್ ಅಲ್ಲ: ಸುಧಾಕರ್ ಶೆಟ್ಟಿ ಸ್ಪಷ್ಟನೆ

ಸಿಎಂ ಬಳಿ ಇರೋದು ನನ್ನ ಕಳುವಾದ ವಾಚ್ ಅಲ್ಲ: ಸುಧಾಕರ್ ಶೆಟ್ಟಿ ಸ್ಪಷ್ಟನೆ
ಬೆಂಗಳೂರು , ಸೋಮವಾರ, 29 ಫೆಬ್ರವರಿ 2016 (15:15 IST)
ಮುಖ್ಯಮಂತ್ರಿ ಸಿದ್ದರಾಮ್ಯಯನವರ ಬಳಿಯಿರುವ ದುಬಾರಿ ವಾಚ್ ನನ್ನ ಕಳುವಾದ ವಾಚ್ ಅಲ್ಲ ಎಂದು ಸುಧಾಕರ್ ಶೆಟ್ಟಿ ಹೇಳಿದ್ದಾರೆ.
 
ಇಂದು ಬೆಳಿಗ್ಗೆ ಪೊಲೀಸ್ ಆಯುಕ್ತ ಮೇಘರಿಕ್ ಅವರನ್ನು ಭೇಟಿಯಾದ ಸುಧಾಕರ್ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯಿರುವ ವಾಚ್ ನನ್ನ ಕಳುವಾದ ವಾಚ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
 ನನ್ನ ಕಳುವಾದ ವಾಚ್‌ಗೂ ಸಿಎಂ ಬಳಿಯಿರುವ ವಾಚ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ಕಾರಣಕ್ಕೆ ಇಂತಹ ಆರೋಪಗಳನ್ನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ
 
ಸಿದ್ದರಾಮಯ್ಯ ಕೈಯಲ್ಲಿದ್ದ ವಾಚ್ ಕಂಪೆನಿಯೇ ಬೇರೆ, ನನ್ನ ಕಳುವಾದ ವಾಚ್ ಕಂಪೆನಿಯೇ ಬೇರೆ, ನಾನು ರೋಲೆಕ್ಸ್, ಷಫರ್ಡ್ ಮತ್ತು ರೋಲೆಕ್ಸ್ ಡ್ರೆಸ್ ವಾಚ್ ಕಂಪೆನಿಗೆ ಸೇರಿದ ವಾಚ್‌ಗಳನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
 
ನನ್ನ ವಾಚ್ ಕಳುವಾದ ಬಗ್ಗೆ ಹಿಂದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಡಾ.ಸುಧಾಕರ್ ಶೆಟ್ಟಿ ಹೇಳಿದ್ದಾರೆ. 

Share this Story:

Follow Webdunia kannada