Select Your Language

Notifications

webdunia
webdunia
webdunia
webdunia

ನನ್ನ ಮಗ ಲಂಬೋರ್ಗಿನಿ ಕಾರು ಬಿಡಿ, ಹೆಲಿಕಾಪ್ಟರ್ ಖರೀದಿಸಬಹುದು: ಕುಮಾರಸ್ವಾಮಿ

ನನ್ನ ಮಗ ಲಂಬೋರ್ಗಿನಿ ಕಾರು ಬಿಡಿ, ಹೆಲಿಕಾಪ್ಟರ್ ಖರೀದಿಸಬಹುದು: ಕುಮಾರಸ್ವಾಮಿ
ಬೆಂಗಳೂರು , ಶುಕ್ರವಾರ, 26 ಫೆಬ್ರವರಿ 2016 (14:26 IST)
ನನ್ನ ಮಗ ಲಂಬೋರ್ಗಿನಿ ಕಾರು ಬಿಡಿ, ಹೆಲಿಕಾಪ್ಟರ್ ಖರೀದಿಸಬಹುದು. ತಾನು ದುಡಿದ ದುಡ್ಡಿನಲ್ಲಿ ಲಂಬೋರ್ಗಿನಿ ಕಾರ್ ಖರೀದಿಸಿದ್ದಾನೆ. ಯಾರು ಗಿಫ್ಟ್ ನೀಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 
 
ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ವಾಚ್ ಬಗ್ಗೆ ಸೂಕ್ತ ಪೊಲೀಸ್ ತನಿಖೆಯಾಗಬೇಕಾಗಿದೆ. ಯಾಕೆಂದರೆ ವಾಚ್ ಕುರಿತಂತೆ ಇಲ್ಲಸಲ್ಲದ ವಿಷಯಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
 
ಡಾ.ಗಿರೀಶ್ ಚಂದ್ರ ವಾಚ್ ಗಿಫ್ಟ್ ನೀಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಆತ್ಮಿಯರು ನೀಡಿದ್ದ ಗಿಫ್ಟ್ ವಿಷಯವನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬಹುದಿತ್ತಲ್ಲವೇ. ಯಾಕೆ ಬಹಿರಂಗಪಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಕಟ್ಟಿಕೊಂಡ ವಾಚ್ ಕಳ್ಳತನದ್ದಾಗಿರಬಹುದು ಎಂದು ನನಗೆ ಸಂಶಯ ವ್ಯಕ್ತವಾಗುತ್ತದೆ. ಆದ್ದರಿಂದ, ವಾಚ್ ಬಗ್ಗೆ ಪಾರದರ್ಶಕ ತನಿಖೆಯಾಗುವುದು ಸೂಕ್ತ ಎಂದಿದ್ದಾರೆ.
 
ಲಾಟರಿ ಹಗರಣದಲ್ಲಿ ಸರಕಾರ ಬಹುದೊಡ್ಡ ಕುಳಗಳನ್ನು ರಕ್ಷಿಸಿದೆ. ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಸಿದ್ದರಾಮಯ್ಯರದ್ದು ಅಪ್ಪಟ ಸುಳ್ಳು ಹೇಳುವ ಸರಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

Share this Story:

Follow Webdunia kannada