ಲೈಂಗಿಕ ತೃಪ್ತಿ ನೀಡಲು ನಿರಾಕರಿಸುತ್ತಿದ್ದ ಪತ್ನಿಯ ಮೈಮೇಲೆ ಪತಿ ಮಹಾಶಯನೊಬ್ಬ ಜಿರಲೆ ಬಿಟ್ಟು ವಿಕೃತಿ ಮೆರೆದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿಯನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅವಿನಾಶ್ ಶರ್ಮಾ ಎಂದು ಗುರುತಿಸಲಾಗಿದ್ದು ಈತನ ಪತ್ನಿ ಸುಜಾತಾ ಪತಿಯ ಈ ವಿಕೃತ ಕೃತ್ಯದ ವಿರುದ್ಧ ವನಿತಾ ಸಹಾಯವಾಣಿಗೆ ದೂರು ಸಲ್ಲಿಸಿದ್ದಾರೆ.
ನನಗೆ ಜಿರಲೆಗಳೆಂದರೆ ಭಯ.ಪತಿ ನನ್ನ ಮೇಲೆ ಜಿರಲೆ ಬಿಟ್ಟು ವಿಕೃತ ಆನಂದವನ್ನು ಪಡೆಯುತ್ತಿದ್ದಾರೆ ಎಂದು ಸುಜಾತಾ ಆರೋಪಿಸಿದ್ದಾರೆ. ಈ ಕುರಿತು ಕೇಳಲಾಗಿ ಅವಿನಾಶ್ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದೆವು. ಆದರೆ ಪತ್ನಿ ಕಳೆದ ಕೆಲ ದಿನಗಳಿಂದ ನನ್ನನ್ನು ಹತ್ತಿರ ಸೇರಿಸಕೊಳ್ಳುತ್ತಿಲ್ಲ. ಹಾಸಿಗೆಯಲ್ಲಿ ಸಹಕರಿಸಲಿ ಎಂದು ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಪತಿಯ ಅಸಮಧಾನಕ್ಕೆ ಪ್ರತಿಕ್ರಿಯಿಸುವ ಸುಜಾತ ಪತಿಗೆ ಕೆಲ ದಿನಗಳಿಂದ ಅನೈತಿಕ ಸಂಬಂಧವಿದೆ. ಇದರಿಂದ ನೊಂದು ಅವರನ್ನು ದೂರವಿಟ್ಟಿದ್ದೆ ಎನ್ನುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ