Select Your Language

Notifications

webdunia
webdunia
webdunia
webdunia

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ
Bangalore , ಬುಧವಾರ, 8 ಮಾರ್ಚ್ 2017 (11:52 IST)
ಬೆಂಗಳೂರು: ನೋಡೀಪ್ಪಾ ದೇಶಪಾಂಡೆ, ನಿಮಗೆ ತಲೆತಲಾಂತರದಿಂದ ಶಿಕ್ಷಣ ಸಿಕ್ಕಿದೆ. ಆದರೆ ನಮ್ಮ ಕುಟುಂಬದಲ್ಲಿ ನಾನೊಬ್ಬನೇ ಶಿಕ್ಷಿತ. ನಮ್ಮ ತಂದೆ ಹೆಬ್ಬೆಟ್ಟು.. ಹೀಗಂತ ಸಿಎಂ ಸಿದ್ಧರಾಮಯ್ಯ ಸಚಿವ ಆರ್.ವಿ. ದೇಶಪಾಂಡೆ ಕಾಲೆಳೆದರು.

 
ಇದು ನಡೆದಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ದಿನಾಚರಣೆ  ನಿಮಿತ್ತ ‘ಬೋಲ್ಡ್ ಫಾರ್ ದಿ ಚೇಂಜ್’ ಕಾರ್ಯಕ್ರಮದಲ್ಲಿ. ಇಷ್ಟೇ ಅಲ್ಲದೆ, ತಮಾಷೆಯ ಮೂಡ್ ನಲ್ಲಿದ್ದ ಸಿಎಂ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯದ್ದೇ ಕಾರುಬಾರು ನೋಡಿ ಆಯೋಜಕರನ್ನು ಅಣಕಿಸಿದರು.

ಕಾರ್ಯಕ್ರಮ  ಸಂಪೂರ್ಣ ಆಂಗ್ಲಮಯವಾಗಿ ಕಾಣುತ್ತಿದೆ. ಇಲ್ಲಿ ಇರುವವರಿಗೆಲ್ಲಾ ಕನ್ನಡ ಬರುತ್ತದೆ ಎಂದುಕೊಂಡಿದ್ದೇನೆ. ಹಾಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ ಎಂದರು. ನಂತರ ಲಿಂಗ ಸಮಾನತೆ ಬಗ್ಗೆ ಕನ್ನಡದಲ್ಲೇ ಮಾತನಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತರ್ಜಾಲದಲ್ಲಿ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಹೇಳಿಕೆ