Select Your Language

Notifications

webdunia
webdunia
webdunia
webdunia

ಧಾರವಾಡದಲ್ಲಿ ಜೋಡಿ ಹತ್ಯೆ: ಪ್ರಕರಣ ದಾಖಲು

ಧಾರವಾಡದಲ್ಲಿ ಜೋಡಿ ಹತ್ಯೆ: ಪ್ರಕರಣ ದಾಖಲು
ಧಾರವಾಡ , ಸೋಮವಾರ, 25 ಮೇ 2015 (12:12 IST)
ಹಳೆ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಹಾಡಗಲೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಬೊಮ್ಮಸಂದ್ರದಲ್ಲಿ ನಡೆದಿದೆ.
 
ಮೃತರನ್ನು ಶಂಕರಪ್ಪ ಲಂಡೆಣ್ಣವರ್‌‌(40) ಹಾಗೂ ಬಸನಗೌಡ ಪಾಟೀಲ್‌(40) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಶಂಕರಪ್ಪ ಎಂಬುವವರು ತೀವ್ರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 
 
ಈ ಕೃತ್ಯವನ್ನು ಇದೇ ಗ್ರಾಮದ ವಾಸಿಯಾದ ಈರಯ್ಯ ಎಂಬುವವರ ಕುಟುಂಬಸ್ಥರು ನಡೆಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. 
 
ಇನ್ನು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳ ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada