ಬೆಂಗಳೂರಿನ ಕನಕಪುರ ರಸ್ತೆಯ ದೊಡ್ಡಕಲ್ಲು ಗ್ರಾ.ಪಂ. ಅಧ್ಯಕ್ಷ , ಜೆಡಿಎಸ್ ಮುಖಂಡ ಮುನಿಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ 8 ಜನರಿಗೆ ಬೆಂಗಳೂರಿನ ಹದಿನೇಳನೇ ಅಪರ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ 8 ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶ್ರೀನಿವಾಸ್ , ರಿಷಿಕುಮಾರ್, ತಿಮ್ಮರಾಯಪ್ಪ, ಮಹಮದ್ ಪೀರ್, ಪ್ರೀತಮ್, ಅರುಣ್ ಕುಮಾರ್, ಶಾಂತಕುಮಾರ್, ಮೂರ್ತಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ ಮತ್ತು 2006ರ ಅಕ್ಟೋಬರ್ 8ರಂದು ಅಂದಿನ ಅಧ್ಯಕ್ಷರಾಗಿದ್ದ ಮುನಿಸ್ವಾಮಿಯನ್ನು ಹತ್ಯೆಗಯ್ಯಲಾಗಿತ್ತು.
ನ್ಯಾಯಮೂರ್ತಿ ಸಾವಿತ್ರಿ ವಿ. ಭಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದರು. 2006ರಲ್ಲಿ ತಲಘಟ್ಟಪುರದಲ್ಲಿ ಮುನಿಸ್ವಾಮಿಯನ್ನು ಹತ್ಯೆ ಮಾಡಲಾಗಿದ್ದು, 8 ಮಂದಿ ಆರೋಪಿಗಳು ಹತ್ಯೆಯಲ್ಲಿ ಭಾಗಿಯಾಗಿದ್ದರು.