Webdunia - Bharat's app for daily news and videos

Install App

ಮಗಳ ಹತ್ಯೆಗೈದು ಸಾವಿಗೆ ಶರಣಾದ ತಾಯಿ

Webdunia
ಗುರುವಾರ, 8 ಅಕ್ಟೋಬರ್ 2015 (12:12 IST)
ಪುಟ್ಟ ಮಗಳ ಹತ್ಯೆಗೈದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಇಂದು ಮುಂಜಾನೆ ಮಂಡ್ಯದಲ್ಲಿ ನಡೆದಿದೆ. 

ಮೃತರನ್ನು ನಗರದ ಪೇಟೆಬೀದಿ ನಿವಾಸಿ ಪದ್ಮೇಶ್ ಎಂಬುವವರ ಪತ್ನಿ ರೂಪ (28) ಹಾಗೂ ಅವರ ಎಂಟು ವರ್ಷದ ಪುತ್ರಿ ಸ್ವಸ್ತಿ ಎಂದು ಗುರುತಿಸಲಾಗಿದೆ. ಮೊದಲು ಮಗಳು ಸ್ವಸ್ತಿಯನ್ನು ನೇಣು ಬಿಗಿದು ಸಾಯಿಸಿದ ತಾಯಿ ನಂತರ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಪದ್ಮೇಶ್‍‌ಗೆ ರೂಪ ಎರಡನೇ ಪತ್ನಿಯಾಗಿದ್ದು, ಇಂದು ಮುಂಜಾನೆ ಪತಿ ಹಾಲು ತರಲೆಂದು ಹತ್ತಿರದ ಅಂಗಡಿಗೆ ಹೋಗಿದ್ದಾಗ ರೂಪ ಮಲಗುವ ಕೋಣೆ ಒಳಗಿನಿಂದ ಚಿಲಕ ಹಾಕಿಕೊಂಡು ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದಾಳೆ.
 
ಮರಳಿ ಮನೆಗೆ ಬಂದ ಪತಿ ಪತ್ನಿ ಏಕೆ ಬಾಗಿಲು ತೆರೆಯುತ್ತಿಲ್ಲವೆಂದು ಕಿಟಕಿಯಿಂದ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. 
 
ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಬಂದ ಮಂಡ್ಯ ನಗ ಪಶ್ಚಿಮ ಠಾಣಾ ವ್ಯಾಪ್ತಿಯ ಪೊಲೀಸರು ಬಾಗಿಲು ಒಡೆದು ಒಳ ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ತಾಯಿ ಮಗು ಇಹಲೋಕ ತ್ಯಜಿಸಿದ್ದರು. 
 
ಘಟನೆಗೆ ಸಂಬಂಧಿಸಿದಂತೆ ಮೃತ ರೂಪಾ ಪತಿ ಪದ್ಮೇಶ್‍ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments