Webdunia - Bharat's app for daily news and videos

Install App

ರೈಲಿಗೆ ಸಿಲುಕಿ ತಾಯಿ-ಮಗು ಸಾವು

Webdunia
ಮಂಗಳವಾರ, 21 ಏಪ್ರಿಲ್ 2015 (09:25 IST)
ಹಳಿ ದಾಟುತಿದ್ದ ತಾಯಿ ಮತ್ತು ಮಗುವಿನ ಮೇಲೆ ರೈಲು ಹರಿದು ಅವರಿಬ್ಬರು ಮೃತಪಟ್ಟ ದಾರುಣ ಘಟನೆ ಸೋಮವಾರ ಪ್ರಾತಃ ಕಾಲ ಬೆಂಗಳೂರಿನಲ್ಲಿ ನಡೆದಿದೆ.

ಬಿಹಾರ್ ಮೂಲದ ಕುಸುಬುದೇವಿ(28) ಮತ್ತು ಒಂದುವರೆ ವರ್ಷದ ಮಗು ಸುನೀತಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 
 
ವೈಟ್‌ಫೀಲ್ಡ್ - ಕೆ. ಆರ್.ಪುರಂ ನಡುವಿನ ಹೂಡಿ ರೈಲ್ವೆ ಗೇಟ್‌ನಲ್ಲಿ  ಈ ಘಟನೆ ನಡೆದಿದ್ದು ಮೃತರ ಕುಟುಂಬ ಬಿಹಾರಕ್ಕೆ ಹೊರಟಿತ್ತು.
 
ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಅಮರದೀಪ್ ಮತ್ತು ಕುಸುಬುದೇವಿ ಕುಟುಂಬ ತಮ್ಮ ಸಂಬಂಧಿಕರೊಬ್ಬರ ಮದುವೆ ಇದ್ದ ಕಾರಣ ಹುಟ್ಟೂರಿಗೆ ಹೊರಟಿತ್ತು. ಹೂಡಿ ರೈಲ್ವೆ ಗೇಟ್ ಮುಚ್ಚಿದ್ದರೂ ಸಹ ಅದರೊಳಗೆ ನುಗ್ಗಿ ಅಮರದೀಪ್ ಮತ್ತು ಇಬ್ಬರು ಮಕ್ಕಳು ಹಳಿ ದಾಟಿ ಹೋದರು. 
 
ಇನ್ನೊಂದು ಮಗುವನ್ನೆತ್ತಿಕೊಂಡು ಹಿಂದೆ ಬರುತ್ತಿದ್ದ ಕುಸುಬುದೇವಿ ಹಳಿ ದಾಟಿದ್ದಳಾದರೂ ಮಗುವಿನ ಚಪ್ಪಲಿ ಕೆಳಗೆ ಬಿದ್ದಿದೆ ಎಂದು ಅದನ್ನೆತ್ತಲು ಹಿಂತಿರುಗಿದ್ದಳು. ಹಳಿ ಮೇಲೆ ಬಿದಿದ್ದ ಚಪ್ಪಲಿ ಎತ್ತುತ್ತಿದ್ದ ಆಕೆಗೆ ಕತ್ತಲಿದ್ದರಿಂದ ರೈಲು ಬರುತ್ತಿದ್ದುದು ಕಾಣಿಸಿಲ್ಲ. ರೈಲು ರೈಲು ಎಂದು ಪತಿ ಕಿರುಚಿಕೊಂಡನಾದರೂ ಅದಾಗಲೇ ರೈಲು ತಾಯಿ ಮಗುವನ್ನು ಬಲಿ ತೆಗೆದುಕೊಂಡಾಗಿತ್ತು. 
 
ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments