Webdunia - Bharat's app for daily news and videos

Install App

ನಕಲಿ ರೈತರ ಖಾತೆ ಸೇರಿದ ಹಣ

Webdunia
ಸೋಮವಾರ, 26 ಜೂನ್ 2023 (18:00 IST)
ರಾಜ್ಯಾದ್ಯಂತ ಕೋಟಿ ಕೋಟಿ ಕಿಸಾನ್ ಸಮ್ಮಾನ್ ನಿಧಿ, ನಕಲಿ ರೈತರ ಖಾತೆ ಸೇರಿದೆ. 1 ಲಕ್ಷದ 99 ಸಾವಿರ ನಕಲಿ ರೈತರ ಖಾತೆಗಳಿಗೆ, ಕೇಂದ್ರ ಸರ್ಕಾರದಿಂದ 122 ಕೋಟಿ ಕಿಸಾನ್ ಸಮ್ಮಾನ್ ಹಣ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಕೇವಲ 81 ಲಕ್ಷ ರೂಪಾಯಿ ಮಾತ್ರ ನಕಲಿ ರೈತರಿಂದ ವಸೂಲಿ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಇನ್ನು‌ 89,500 ನಕಲಿ ರೈತರಿಗೆ 34 ಕೋಟಿ ಹಣವನ್ನ ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯ ಸರ್ಕಾರ ಪಾವತಿಸಿತ್ತು. ಈ ಹಣವನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಇಂದಿಗೂ ವಸೂಲಿ ಮಾಡಲಾಗಿಲ್ಲ. ಆನ್ ಲೈನ್ ಮೂಲಕ ರೈತರು ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನಲ್ಲಿ ನೆರೆ ರಾಜ್ಯದ ಕೆಲ ಸೈಬರ್ ಖದೀಮರು ಕಿಸಾನ್ ಸಮ್ಮಾನ ನಿಧಿಗೆ ಅರ್ಜಿ ಹಾಕಿದ್ದಾರೆ. ಸೂಕ್ತ ದಾಖಲೆ ಪರಿಶೀಲಿಸದೇ ಕೃಷಿ ಅಧಿಕಾರಿಗಳು ಆನಲೈನಲ್ಲಿ ಅರ್ಜಿ‌ ಹಾಕಿದವರಿಗೆಲ್ಲ ಹಣ ಪಾವತಿಸಿ ಅಕ್ರಮ ಎಸಗಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ಸೇರಿ ಹೊರ ರಾಜ್ಯದ ನಕಲಿ ರೈತರಿಗೆ ರಾಜ್ಯದ ಕಿಸಾನ್ ಸಮ್ಮಾನ್ ನಿಧಿ ಪಾವತಿಸಿದ್ದು ಬಯಲಾಗಿದೆ. ನಿಜವಾದ ಅನ್ನದಾತರಿಗೆ ಪಾವತಿಯಾಗಬೇಕಿದ್ದ ನೂರಾರು ಕೋಟಿ ಹಣ ಕಿಸಾನ್ ಸಮ್ಮಾನ್ ನಿಧಿ‌ ಅನ್ಯರ ಖಾತೆಗೆ ಪಾವತಿಸಿ ಅಕ್ರಮವೆಸಗಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments