ಲೋಕಸಭೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿ ದೆಹಲಿ ಗದ್ದುಗೆ ಏರಲು ಸಜ್ಜಾಗಿರುವ ನರೇಂದ್ರ ಮೋದಿ ದೆಹಲಿಗೆ ತೆರಳುವ ಮುನ್ನ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ತಾಯಿ ತಮ್ಮ ಪುತ್ರ ಮೋದಿಗೆ 101 ರೂ. ಕಾಣಿಕೆಯನ್ನು ಪ್ರೀತಿಯಿಂದ ಕೊಟ್ಟರು.
ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ ಗುಜರಾತ್ಗೆ ಗುಡ್ಬೈ ಹೇಳಿದ ಮೋದಿ ಗುಜರಾತ್ ನನಗೆ ಜನ್ಮ ನೀಡಿದ ಭೂಮಿ. ಪ್ರಧಾನಿ ಆದಮೇಲೂ ಗುಜರಾತ್ಗೆ ಭೇಟಿ ನೀಡುತ್ತೇನೆ ಎಂದು 'ಆವು ಜೋ ಗುಜರಾತ್' ಎಂದು ಹೇಳಿದರು. ನಾನು ದೆಹಲಿಯನ್ನು ಬಿಡುವಾಗ ನಮ್ಮ ಸಂಪ್ರದಾಯದ ರೀತ್ಯ 6.25 ಕೋಟಿ ಜನರಿಗೆ ಆವಜೋ ಗುಜರಾತ್ ಹೇಳಲು ಬಯಸುವುದಾಗಿ ಮೋದಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಮೋದಿ ಅವರು ಮೇ 26ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಗುಜರಾತಿನಿಂದ ನಿರ್ಗಮಿಸುವ ಮುಂಚೆ ಮಾಧ್ಯಮದವರಿಗೆ ಕೂಡ ಧನ್ಯವಾದ ಸೂಚಿಸಿದರು.ಮೋದಿ ಗುಜರಾತ್ ಬಿಡುವುದಕ್ಕೆ ಮುಂಚೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದೂ ಸೇರಿದಂತೆ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹೆಸರನ್ನು ಸೂಚಿಸಿ ದೆಹಲಿಗೆ ನಿರ್ಗಮಿಸಿದ್ದಾರೆ.