Select Your Language

Notifications

webdunia
webdunia
webdunia
webdunia

ಕುಶಾಲತೋಪು ಸಿಡಿಸುವ ವೇಳೆ ಅಚಾತುರ್ಯದಿಂದ ಮಿಸ್‌ಫೈರ್

ಕುಶಾಲತೋಪು ಸಿಡಿಸುವ ವೇಳೆ ಅಚಾತುರ್ಯದಿಂದ ಮಿಸ್‌ಫೈರ್
, ಶನಿವಾರ, 23 ಆಗಸ್ಟ್ 2014 (19:01 IST)
ಅನಂತಮೂರ್ತಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಂದರ್ಭದಲ್ಲಿ  ಕುಶಾಲತೋಪು ಸಿಡಿಸುವ ವೇಳೆ ಮಿಸ್ ಫೈರ್ ಆದ ಘಟನೆ ನಡೆದಿದೆ. ಪೊಲೀಸ್ ಬ್ಯಾಂಡ್  ಸಿಬ್ಬಂದಿಯೊಬ್ಬನ ಬಂದೂಕಿನಿಂದ ಮೊದಲೇ ಗುಂಡುಹಾರಿದ್ದರಿಂದ ಪಕ್ಕದಲ್ಲಿದ್ದ ಸಿಬ್ಬಂದಿ ದಿಗ್ಭ್ರಮೆಯಿಂದ ನೋಡಿದರು.

ಅದೃಷ್ಟವಶಾತ್ ಯಾರಿಗೂ ಗುಂಡು ತಗುಲದೇ ಬಚಾವಾಗಿದ್ದಾರೆ. ಕುಶಾಲ ತೋಪು ಹಾರಿಸುವುದಕ್ಕೆ ಸೂಚನೆ ನೀಡುವ ಮುನ್ನವೇ ಬಂದೂಕಿನಿಂದ ಗುಂಡು ಹಾರಿತ್ತು. ಅನಂತಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸುವುದಕ್ಕಾಗಿ ಪೊಲೀಸ್ ಸಿಬ್ಬಂದಿ ಬಂದೂಕುಗಳನ್ನು ಹಿಡಿದು ನಿಂತು ಕುಶಾಲ ತೋಪು ಹಾರಿಸುವುದಕ್ಕೆ ಸಜ್ಜಾಗಿದ್ದರು.

ಆದರೆ ಸಿಬ್ಬಂದಿಯೊಬ್ಬನ ಅಚಾತುರ್ಯದಿಂದ ಮೊದಲೇ ಗುಂಡು ಗಾಳಿಗೆ ಹಾರಿತು. ಇದರಿಂದ ಅಕ್ಕಪಕ್ಕದವರಿಗೆ ತಗುಲದೇ ಸ್ವಲ್ಪದರಲ್ಲಿ ಅಪಾಯದಿಂದ ಬಚಾವಾಗಿದ್ದಾರೆ. 
 

Share this Story:

Follow Webdunia kannada