Select Your Language

Notifications

webdunia
webdunia
webdunia
webdunia

ಸಾಫ್ಟ್‌ವೇರ್ ಎಂಜಿನಿಯರ್ ಮೇಲೆ ದುಷ್ಕರ್ಮಿಗಳ ಹಲ್ಲೆ

ಸಾಫ್ಟ್‌ವೇರ್ ಎಂಜಿನಿಯರ್ ಮೇಲೆ ದುಷ್ಕರ್ಮಿಗಳ ಹಲ್ಲೆ
, ಬುಧವಾರ, 23 ಏಪ್ರಿಲ್ 2014 (18:34 IST)
ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ  ನಾಲ್ಕೈದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ಕೋರಮಂಗಲ ಬಡಾವಣೆಯಲ್ಲಿ ಪಟೇಲ್ ನಾರಾಯಣ ರೆಡ್ಡಿ ಬಡಾವಣೆಯಲ್ಲಿ ಈ ಹಲ್ಲೆಯನ್ನು ಮಾಡಲಾಗಿದೆ.

ಹೆಚ್‌ಸಿಎಲ್ ಕಂಪನಿಯ ಉದ್ಯೋಗಿ ಸತ್ವೀರ್ ಎಂಬವರು ಅಂಗಡಿಯ ಎದುರು ನಿಂತಿದ್ದಾಗ ಕುಡಿದುಬಂದ ನಾಲ್ಕೈದು ಮಂದಿ ಸತ್ವೀರ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆಂದು ವರದಿಯಾಗಿದೆ. ಅವರು ಬಾಟಲುಗಳಿಂದ ಸತ್ವೀರ್ ಮೇಲೆ ಹಲ್ಲೆ ಮಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಸತ್ವೀರ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲವೆಂದು ಹೇಳಲಾಗುತ್ತಿದೆ.

Share this Story:

Follow Webdunia kannada