Select Your Language

Notifications

webdunia
webdunia
webdunia
webdunia

ತೀರ್ಥಹಳ್ಳಿ: ಬಾಲಕಿಯನ್ನು ಅಪಹರಿಸಿ , ರೇಪ್ ಮಾಡಿ, ವಿಷ ಕುಡಿಸಿ ಕೊಂದ ಕಾಮುಕರು

ತೀರ್ಥಹಳ್ಳಿ: ಬಾಲಕಿಯನ್ನು ಅಪಹರಿಸಿ , ರೇಪ್ ಮಾಡಿ, ವಿಷ ಕುಡಿಸಿ ಕೊಂದ ಕಾಮುಕರು
ಶಿವಮೊಗ್ಗ , ಶನಿವಾರ, 1 ನವೆಂಬರ್ 2014 (11:11 IST)
ಕಳೆದ ಅಕ್ಟೋಬರ್ 29 ರಂದು ಬೆಳಿಗ್ಗೆ ಅಪಹೃತವಾಗಿ ಆ ದಿನ ಸಂಜೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. 

ತೀರ್ಥಹಳ್ಳಿಯಿಂದ 14 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಮೂವರು ಅಪರಿಚಿತ ಯುವಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ  ನಂತರ ವಿಷ ಕುಡಿಸಿ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಅದೇ ದಿನ ಸಂಜೆ  ಅನಂದಗಿರಿಬೆಟ್ಟದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಶುಕ್ರವಾರ ಸಂಜೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. 
 
ಆಕೆಯನ್ನು ಅಪಹರಿಸಿದ್ದ ಯುವಕರು ಅತ್ಯಾಚಾರ ನಡೆಸಿ ವಿಷ ಕುಡಿಸಿದ್ದಾರೆ ಎಂದು ಮೃತ ಬಾಲಕಿಯ ತಂದೆ ಇಂದು ಬೆಳಿಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 
ಮಣಿಪಾಲ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತೀವೃ ಶೋಧ ನಡೆಸಿದ್ದಾರೆ. 

Share this Story:

Follow Webdunia kannada