Select Your Language

Notifications

webdunia
webdunia
webdunia
webdunia

ವಸತಿ ಶಾಲೆ ಖಾಲಿ, ಖಾಲಿ, ಸಚಿವ ಆಂಜನೇಯ ಬರುತ್ತಿರೋದು ಏಕೆ?

ವಸತಿ ಶಾಲೆ ಖಾಲಿ, ಖಾಲಿ, ಸಚಿವ ಆಂಜನೇಯ ಬರುತ್ತಿರೋದು ಏಕೆ?
ಬಿಜಾಪುರ , ಶುಕ್ರವಾರ, 22 ಆಗಸ್ಟ್ 2014 (12:30 IST)
ಅಲಮೇಲದ ರಾಣಿ ಚೆನ್ನಮ್ಮ  ವಸತಿ ಶಾಲೆಯಲ್ಲಿನ ಎಲ್ಲ ಮಕ್ಕಳು ಖಾಲಿ ಮಾಡಿಕೊಂಡು ಮನೆಗೆ ತೆರಳಿದ್ದಾರೆ. ಆದರೆ ವಸತಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆಂಜನೇಯ ಅಲ್ಲಿಗೆ ಭೇಟಿ ನೀಡಲಿದ್ದಾರೆ. ವಸತಿ ಶಾಲೆಯಲ್ಲಿ ಭೀಭತ್ಸ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದ ಸುದ್ದಿ ಬೆಳಕಿಗೆ ಬಂದ ಮೇಲೆ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ಖಾಲಿ ಮಾಡಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಹೀಗಾಗಿ ವಸತಿ ಶಾಲೆ ಖಾಲಿ, ಖಾಲಿಯಾಗಿದೆ.  ಆದರೆ ಆಂಜನೇಯ ಮಕ್ಕಳಿಲ್ಲದ ವಸತಿ ಶಾಲೆಗೆ ಯಾವ ಉದ್ದೇಶಕ್ಕಾಗಿ ಬರುತ್ತಾರೆ ಎಂದು ಸಚಿವರ ಭೇಟಿಗೆ ಗ್ರಾಮಸ್ಥರು ವಿರೋಧಿಸಿದ್ದಾರೆ. ನಿನ್ನೆ ಅಲಮೇಲ ಪಟ್ಟಣದ ಬಂದ್‌ಗೆ ಕರೆ ನೀಡಲಾಗಿತ್ತು.

ನಿನ್ನೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಸುಮಾರು 250 ರಷ್ಟು ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದರು. ಆದರೆ ಲೈಂಗಿಕ ದೌರ್ಜನ್ಯದ ಘಟನೆಯಿಂದ ಎಲ್ಲಾ ವಿದ್ಯಾರ್ಥಿನಿಯರು ಹಾಸ್ಟೆಲ್ ಖಾಲಿ ಮಾಡಿದ್ದು ಬಿಕೋ ಎನ್ನುತ್ತಿದೆ.

Share this Story:

Follow Webdunia kannada