Webdunia - Bharat's app for daily news and videos

Install App

ಜೆಡಿಎಸ್ ಶಾಸಕನ ಸಹೋದರನಿಗೆ ಸಚಿವ ಎ.ಮಂಜು ಬೆದರಿಕೆ ಆರೋಪ

Webdunia
ಗುರುವಾರ, 13 ಅಕ್ಟೋಬರ್ 2016 (16:22 IST)
ಪಶುಸಂಗೋಪನಾ ಸಚಿವ ಎ.ಮಂಜು ಅವರ ಬೆದರಿಕೆಗೆ ಹೆದರಿ ನನ್ನ ಸಹೋದರ ವಿಆರ್‌ಎಸ್ ತೆಗೆದುಕೊಂಡಿದ್ದಾನೆ ಎಂದು ಹಾಸನ ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ. 
 
ಪಶುಸಂಗೋಪನಾ ಸಚಿವ ಎ.ಮಂಜು ಅವರು ನನ್ನ ಸಹೋದರ ಡಾ.ಮೋಹನ ದಾಸ್‌ಗೆ ನೀನು ಭ್ರಷ್ಟಾಚಾರ ಮಾಡಿದ್ದೀಯಾ ಎಂದು ಬೆದರಿಕೆ ಒಡ್ಡಿದ್ದರು. ಇದರಿಂದ ಮನನೊಂದು ಆತ ಪಶುಸಂಗೋಪನಾ ಇಲಾಖೆಯ ಎಡಿ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾನೆ ಎಂದು ಶಾಸಕ ಎಚ್.ಎಸ್.ಪ್ರಕಾಶ್ ದೂರಿದರು.
 
ಪಶುಸಂಗೋಪನಾ ಇಲಾಖೆಯಲ್ಲಿ ನನ್ನ ಸಹೋದರ ಡಾ.ಮೋಹನ ದಾಸ್‌ ಭ್ರಷ್ಟಾಚಾರ ಮಾಡಿರುವುದನ್ನು ಸಚಿವ ಎ.ಮಂಜು ಸಾಬೀತುಪಡಿಸಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ನೇರ ಸವಾಲ್ ಎಸೆದಿದ್ದಾರೆ. 
 
ನಾನು ಬೆದರಿಕೆ ಒಡ್ಡಿಲ್ಲ: ಸಚಿವ ಎ.ಮಂಜು
 
ಪಶುಸಂಗೋಪನಾ ಇಲಾಖೆಯ ಎಡಿ ಆಗಿದ್ದ ಡಾ.ಮೋಹನ ದಾಸ್‌ಗೆ ನಾನು ಬೆದರಿಕೆ ಒಡ್ಡಿಲ್ಲ. ಅವರ ವಿರುದ್ಧ ದೂರು ಬಂದಿದ್ದಕ್ಕೆ ಎಚ್ಚರಿಕೆ ನೀಡಿದ್ದೆ. ತಪ್ಪು ತಿಳಿದುಕೊಂಡು ವಿಆರ್‌ಎಸ್ ಪಡೆದರೇ ನಾನು ಜವಾಬ್ದಾರನಲ್ಲ ಎಂದು ಸಚಿವ ಎ.ಮಂಜು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments