ನೀವು ರಾಜಕೀಯದಲ್ಲಿ ಅಧೋಗತಿ ಸ್ಥಿತಿಗೆ ತಲುಪಿದ್ದಾಗ ನಿಮ್ಮ ಬೆಂಬಲಕ್ಕೆ ನಾವು ನಿಂತಿರುವುದನ್ನು ಮರೆಯಬೇಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಟಾಂಗ್ ನೀಡಿದ್ದಾರೆ.
ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಜೆಡಿಎಸ್ ಸದಸ್ಯರು 3 ಬಾರಿ ಗೈರು ಹಾಜರಾಗುವ ಮೂಲಕ ಕೋರಂ ಕೊರತೆ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಪತ್ರ ಬರೆದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ನೀವು ರಾಜಕೀಯದಲ್ಲಿ ಅನುಭವವನ್ನು ಹೊಂದಿದ್ದೀರಿ. ಆದರೆ, ನಿಮ್ಮ ಕುಟುಂಬದ ವೈಯಕ್ತಿಕ ಹಿತ್ತಾಸಕ್ತಿಗಳಗೆ ನಾವು ಬದ್ಧರಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಜೆಡಿಎಸ್ ಸದಸ್ಯರು ಗೈರು ಹಾಜರಾಗುತ್ತಿದ್ದಾರೆ. 4 ನೇಯ ಭಾರಿಗೆ ಗೈರು ಹಾಜರಾದರೆ ಅವರ ಸದಸ್ಯತ್ವ ರದ್ದಾಗುತ್ತದೆ. ನಂತರ, ಸದಸ್ಯರು ನಿಮ್ಮನ್ನು ಬೈದುಕೊಳ್ಳವುದಿಲ್ಲವೇ ಎಂದು ಎ.ಮಂಜು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.