Webdunia - Bharat's app for daily news and videos

Install App

ಪಾಲಿಕೆ ನಿರ್ಲಕ್ಷ್ಯ: 30 ಲಕ್ಷದ ಅಂಬೇಡ್ಕರ್ ಪ್ರತಿಮೆ ಧೂಳಿನಲ್ಲಿ...?!

Webdunia
ಶನಿವಾರ, 28 ಮಾರ್ಚ್ 2015 (09:35 IST)
ಇಲ್ಲಿನ ಮಹಾನಗರ ಪಾಲಿಕೆಯ ಮುಂಭಾಗ ಉದ್ಯಾನದಲ್ಲಿ ನಿರ್ಮಾಣವಾಗಬೇಕಿದ್ದ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯು ಪೊಲೀಸ್ ಇಲಾಖೆಯ ಕೊಠಡಿಯೊಂದರಲ್ಲಿ ಧೂಳಿಡಿದು ಮೂಲೆ ಸೇರಿದೆ. 
 
ಈ ಪ್ರತಿಮೆಯನ್ನು ಕಳೆದ ಒಂಬತ್ತು ತಿಂಗಳ ಹಿಂದೆಯೇ ತರಿಸಲಾಗಿದ್ದರೂ ಕೂಡ ಇಲ್ಲಿಯವರೆಗೂ ಅದನ್ನು ಅನುಷ್ಠಾನ ಮಾಡದಿರುವುದು ದುರಾದೃಷ್ಟಕರ ಸಂಗತಿ. 
 
ಇನ್ನು ಮೂಲಗಳ ಪ್ರಕಾರ, ಈ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದು ಹೇಗೆ ಎಂದು ತಿಳಿಯಲು ಇಲ್ಲಿನ ಪಾಲಿಕೆ ಸದಸ್ಯರು ಮೂರು ಬಾರಿ ಮುಂಬೈಗೆ ಭೇಟಿ ನೀಡಿ ಪರಿಶೀಲಿಸಿದ್ದರು ಎನ್ನಲಾಗಿದ್ದು, ಅದಕ್ಕಾಗಿ ಸುಮಾರು 5 ಲಕ್ಷ ಖರ್ಚಾ ಮಾಡಿಡಿದ್ದರೆ, ಪ್ರತಿಮೆಯನ್ನು ತರಲು ಸಾರಿಗೆ ಖರ್ಚಿಗಾಗಿ 7 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗೆ ಪ್ರತಿಮೆಯ ಅನಾವರಣ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯರು ಸುಮಾರು 30 ಲಕ್ಷ ರೂ. ವ್ಯಯಿಸಿದ್ದಾರೆ. ಆದರೆ ಪ್ರತಿಮೆಯನ್ನು ಮಾತ್ರ ಇಲ್ಲಿಯವರೆಗೂ ಅನಾವರಣ ಮಾಡಿಲ್ಲ. 
 
ಪಾಲಿಕೆಯ ಈ ಕುರುಡು ನೀತಿಯನ್ನು ಕಂಡು ಮಾಧ್ಯಮಗಳು ಪ್ರಶ್ನಿಸಲು ಯತ್ನಿಸುತ್ತಿವೆಯಾದರೂ ಪಾಲಿಕೆಯ ಯಾವೊಬ್ಬ ಸದಸ್ಯರೂ ಕೂಡ ಸೂಕ್ತ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಇದ್ದು, ಅಂದಾದರೂ ಪ್ರತಿಮೆ ಅನಾವರಣಗೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments