Select Your Language

Notifications

webdunia
webdunia
webdunia
webdunia

ಕನ್ನಡಾಂಬೆಯ ಶವಯಾತ್ರೆ ಮಾಡಿದ ಎಂಇಎಸ್ ,ಶಿವಸೇನೆ

ಕನ್ನಡಾಂಬೆಯ ಶವಯಾತ್ರೆ ಮಾಡಿದ ಎಂಇಎಸ್ ,ಶಿವಸೇನೆ
ಬೆಳಗಾವಿ , ಶುಕ್ರವಾರ, 1 ಆಗಸ್ಟ್ 2014 (14:14 IST)
ಬೆಳಗಾವಿಯ ಶಿನ್ನೊಳ್ಳಿ ಗ್ರಾಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸದಸ್ಯರು ಗ್ರಾಮದಲ್ಲಿ ಕನ್ನಡಾಂಬೆಯ ಶವಯಾತ್ರೆ ಮಾಡಿದ ನಂತರ ಪ್ರತಿಕೃತ ದಹಿಸಿ ಉದ್ಧಟತನ ಮೆರೆದ ಘಟನೆ ವರದಿಯಾಗಿದೆ.
 
ಎಂಇಎಸ್ ಪುಂಡರು ಮತ್ತೆ ಪುಂಡಾಟಿಕೆ ಆರಂಭಿಸಿದ್ದು ಕನ್ನಡಾಂಬೆಯ ಶವಯಾತ್ರೆ ಮಾಡಿದ್ದಲ್ಲದೇ ಕನ್ನಡ ಧ್ವಜವನ್ನು ಕೂಡಾ ಸುಟ್ಟು ಹಾಕಿ ಹೇಯ ಕೃತ್ಯವನ್ನು ಮುಂದುವರಿಸಿದ್ದಾರೆ.
 
ಕನ್ನಡಾಂಬೆಯ ಶವಯಾತ್ರೆ ತೆಗೆದ ಪುಂಡರ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

Share this Story:

Follow Webdunia kannada