Select Your Language

Notifications

webdunia
webdunia
webdunia
webdunia

ನಾಳೆ ಕರ್ನಾಟಕ ಬಂದ್: ಮೇಕೆದಾಟು ಯೋಜನೆ ಜಾರಿ ಶತ ಸಿದ್ಧ: ಸಿದ್ದರಾಮಯ್ಯ

ನಾಳೆ ಕರ್ನಾಟಕ ಬಂದ್: ಮೇಕೆದಾಟು ಯೋಜನೆ ಜಾರಿ ಶತ ಸಿದ್ಧ: ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 17 ಏಪ್ರಿಲ್ 2015 (14:56 IST)
ಮೇಕೆದಾಟು ಯೋಜನೆ ಜಾರಿ ಶತ ಸಿದ್ಧ. ಯಾವುದೇ ಕಾರಣಕ್ಕೂ ನಾಳೆ ನೀಡಿರುವ ಬಂದ್ ಕರೆ ಶಾಂತಿಯಿತವಾಗಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಮೇಕೇದಾಟು ಯೋಜನೆಯ ಬಗ್ಗೆ ನೆರೆಯ ರಾಜ್ಯವಾದ ತಮಿಳುನಾಡು ಅನಗತ್ಯವಾಗಿ ವಿವಾದವನ್ನು ಸೃಷ್ಟಿಸುತ್ತಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಘೋಷಿಸಿದರು.

ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಪೆಟ್ರೋಲ್ ಬಂಕ್ ಮಾಲೀಕರ ಸಂಘ ಸೇರಿದಂತೆ ವ್ಯಾಪಾರಿಗಳ ಸಂಘ ಕೂಡಾ ಬಂದ್‌ಗೆ ಬೆಂಬಲ ಸೂಚಿಸಿವೆ.

ಕರ್ನಾಟಕ್ ಬಂದ್‌‌ನಿಂದಾಗಿ ಅಹಿತಕರ ಘಟನೆಗಳನ್ನು ತಡೆಯಲು ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Share this Story:

Follow Webdunia kannada