ವೈದ್ಯರಿಗೆ ಬ್ಲಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಯನಾ ಕೃಷ್ಣಾ ಜೊತೆ ಆರೋಪಿಯಾಗಿದ್ದ ಮೇಘಾಳನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಮೇಘಾಳನ್ನು ಸಿಸಿಬಿ ಪೊಲೀಸರು ಬಂಧಿಸಿದರು.
ಪ್ರಕರಣದ ಮತ್ತೊಬ್ಬ ಆರೋಪಿ ನಯನಾಕೃಷ್ಣ ತಲೆಮರೆಸಿಕೊಂಡಿದ್ದು, ಅವರ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಆದರೆ ಮೇಘಾಗೆ ನಿರೀಕ್ಷಣಾ ಜಾಮೀನು ಸಿಕ್ಕಿರಲಿಲ್ಲ.
ಮೇಘಾ ಮತ್ತು ನಯನಾ ಗಣ್ಯವ್ಯಕ್ತಿಗಳ ಜೊತೆ ಪ್ರಣಯದಾಟವಾಡಿ ಅದರ ಬ್ಲೂಫಿಲಂ ರಹಸ್ಯವಾಗಿ ತೆಗೆದು ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ನಡುವೆ ತಲೆತಪ್ಪಿಸಿಕೊಂಡಿರುವ ನಯನಾಕೃಷ್ಣ ಸುದ್ದಿವಾಹಿನಿಗೆ ಹೇಳಿಕೆ ನೀಡಿದ್ದು, ನನ್ನ ವಿರುದ್ಧ ಆರೋಪ ಮಾಡಿದ ವೈದ್ಯರು ನನಗೆ ಗೊತ್ತೇ ಇಲ್ಲ. ಆರೋಪ ಮಾಡಿದವರು ನೇರವಾಗಿ ನನ್ನೆದುರು ಬಂದರೆ ನಾನು ಉತ್ತರಿಸುತ್ತೇನೆ.
ಅವರ ವಿಕೃತಿಗಳಿಗೆ ನಾನು ತಲೆಬಾಗಿಲ್ಲ. ಅವರ ಆಸೆಗಳಿಗೆ ಕಾಂಪ್ರಮೈಸ್ ಆಗಿಲ್ಲ. ಅದಕ್ಕಾಗಿ ನನ್ನ ಮೇಲೆ ಕೇಸ್ ಹಾಕಬೇಕು ಎಂದು ತಂತ್ರ ಮಾಡಿದ್ದಾರೆ. ನಾನೆಲ್ಲೂ ಓಡಿಹೋಗಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೀತಾ ಇದ್ದು, ಕೆಲವರು ಹೇಳಿದ್ದನ್ನು ನಾನು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಹೀಗೆ
ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ನೇರವಾಗಿ ನಿಮ್ಮ ಚಾನೆಲ್ಗೆ ಬರುತ್ತೇನೆ. ಅವರೂ ಚಾನೆಲ್ಗೆ ಬರಲಿ ಎಂದು ಹೇಳಿದ್ದಾರೆ.