Select Your Language

Notifications

webdunia
webdunia
webdunia
webdunia

ಮೇಟಿಕುರ್ಕೆ ಬಸ್ ದುರಂತದಲ್ಲಿ ಸುಟ್ಟಗಾಯಗಳಾದ ಪ್ರಿಯಾಗೆ ಚಿಕಿತ್ಸೆ

ಮೇಟಿಕುರ್ಕೆ ಬಸ್ ದುರಂತದಲ್ಲಿ ಸುಟ್ಟಗಾಯಗಳಾದ ಪ್ರಿಯಾಗೆ ಚಿಕಿತ್ಸೆ
, ಮಂಗಳವಾರ, 22 ಏಪ್ರಿಲ್ 2014 (11:10 IST)
ಬೆಂಗಳೂರು:ಚಿತ್ರದುರ್ಗದಲ್ಲಿ ಮೇಟಿಕುರ್ಕೆ ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಆಸ್ಪತ್ರೆಗೆ ಸೇರಿಸಿದ್ದ ಪ್ರಿಯಾ ಎಂಬ ಗೃಹಿಣಿ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ.  19 ವರ್ಷ ವಯಸ್ಸಿನ , ಬೆಂಗಳೂರಿನ ಶ್ರೀನಗರ ನಿವಾಸಿ ಪ್ರಿಯಾರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಮೇಟಿಕುರ್ಕೆ ದುರಂತದಲ್ಲಿ  ಮೃತಪಟ್ಟ 6 ಮಂದಿಯ ಶವಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಶವಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ ಡಿಎನ್‌ಎ ವರದಿ ಬರುವ ಮುನ್ನವೇ ಎಲ್ಲ ಶವಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಕುಟುಂಬ ವರ್ಗದವರ ಪ್ರತಿರೋಧದ ನಡುವೆಯೂ ನಡೆಸಲಾಗಿತ್ತು. 
 
ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದ ಎಸ್‌ಪಿಆರ್ ಸ್ಲೀಪರ್ ಕೋಚ್ ಬಸ್ ಚಿತ್ರದುರ್ಗದ ಹಿರಿಯೂರಿನ ಮೇಟಿಕುರ್ಕಿ ಬಳಿ ಬೆಂಕಿಗಾಹುತಿಯಾಗಿದ್ದು, 6 ಜನರು ಸಜೀವ ದಹನಗೊಂಡ ಭೀಕರ ದುರಂತ ಸಂಭವಿಸಿತ್ತು.  ಮೊದಲು ಡಿವೈಡರ್‌ಗೆ ಬಸ್ ಡಿಕ್ಕಿಹೊಡೆದು ಪಲ್ಟಿ ಹೊಡೆದ ಬಳಿಕ ಬೆಂಕಿಹೊತ್ತಿಕೊಂಡು ಧಗ ಧಗ ಉರಿದು ಸಂಪೂರ್ಣ ಸುಟ್ಟುಹೋಗಿದೆ. 
 

Share this Story:

Follow Webdunia kannada