Webdunia - Bharat's app for daily news and videos

Install App

ವೈಚಾರಿಕ ಸಹಿಸಿಕೊಳ್ಳದಿರುವುದು ಶೋಚನೀಯ: ಮಾತೆ ಮಹಾದೇವಿ

Webdunia
ಬುಧವಾರ, 6 ಸೆಪ್ಟಂಬರ್ 2017 (15:33 IST)
ಕಲಬುರ್ಗಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಘೋರ ಅನ್ಯಾಯ. ವಿಚಾರವಾದ, ವೈಚಾರಿಕವನ್ನು ಸಹಿಸಿಕೊಳ್ಳದಿರುವುದು ಶೋಚನೀಯ ಸಂಗತಿ. ನೇರ, ದಿಟ್ಟ, ನಿಸ್ವಾರ್ಥವಿರುವ ಇಂತಹ ವ್ಯಕ್ತಿಗಳ ಬಗ್ಗೆ ವಿರೋಧಿ ಮನೋಭಾವ ಹೊಂದಿರುವುದು ಖಂಡನೀಯ ಎಂದು ಮಾತೆ ಮಹಾದೇವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗಿಂತ ಎತ್ತರದಲ್ಲಿ ಕೂರುತ್ತಿದ್ದ ಪಂಚಾಚಾರ್ಯರಿಗೆ ಈಗ ದುರಂಹಕಾರ ಕಡಿಮೆಯಾಗಿದೆ. ಶಿವಯೋಗ ಮಂದಿರ ಸಮಾವೇಶದಲ್ಲಿ ಎಲ್ಲರ ಸಮನಾಗಿ ಕುಳಿತು ಸೌಜನ್ಯ ತೋರಿದಕ್ಕೆ ಸಂತಸವಾಗಿದೆ. ಮಾನವನ ಹೆಗಲಮೇಲೆ ಅಡ್ಡಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದಿರಲು ನಿರ್ಧರಿಸಿರುವ ಪಂಚಾಚಾರ್ಯರ ನಿರ್ಣಯಕ್ಕೆ ಸ್ವಾಗತ. ಆದರೆ ವಿರಕ್ತರು ಪಂಚಾಚಾರ್ಯರೊಂದಿಗೆ ಸೇರಬಾರದು. ಆದರೆ ತತ್ವ ಭ್ರಷ್ಟತೆಯಿಂದ ಪಂಚಾಚಾರ್ಯದೊಂದಿಗೆ ಸೇರಿದ್ದಾರೆ ಎಂದು ಹೇಳಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಯಲ್ಲಿ ಯಾವುದೇ ರಾಜಕೀಯ ಕೈವಾಡ ಇಲ್ಲ. ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯೂ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆದಿರುವ ಹೋರಾಟದಲ್ಲಿ ಭಾಗವಹಿಸಿ ಅವರೂ ಲಾಭ ಪಡೆಯಲಿ. ಸೆಪ್ಟೆಂಬರ್ 10 ರಂದು ನಡೆಯಬೇಕಿದ್ದ ಕಲಬುರ್ಗಿ ಚಲೋ ಸೆ. 24ಕ್ಕೆ ಮುಂದೂಡಲಾಗಿದೆ. ಸುಮಾರು 3 ಲಕ್ಷ ಜನ ಸೇರಿಸುವ ನಿರೀಕ್ಷೆಯಿದ್ದು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಟ ಚುರುಕುಗೊಳಿಸುವುದಾಗಿ ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments