Webdunia - Bharat's app for daily news and videos

Install App

ಊಟ ಸಾಕಾಗಲಿಲ್ಲ ಎಂದು ಮದುವೆಯೇ ಮುರಿದು ಹೋಯ್ತು?

Webdunia
ಭಾನುವಾರ, 9 ಏಪ್ರಿಲ್ 2017 (09:29 IST)
ಬೆಂಗಳೂರು: ಮೀಸೆ ಹೊತ್ತ ಈ ಗಂಡಿಗೆ ಎಂಥಾ ಡಿಮ್ಯಾಂಡ್ ನೋಡಿ! ಮದುವೆ ಮುರಿದು ಬೀಳಲು ಹಲವು ಕಾರಣಗಳಿರಬಹುದು. ಆದರೆ ಈ ವರ ಮಹಾಶಯ ಊಟ ಕಡಿಮೆಯಾಯ್ತು ಎಂದು ಮದುವೆಯೇ ಮುರಿದುಕೊಂಡ!

 

ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಘಟನೆ ನಡೆದಿದೆ. ರಿಸೆಪ್ಷನ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವರನ ಕಡೆಯವರಿಗೆ 30 ಜನ ಜನರಿಗೆ ಊಟ ಕಡಿಮೆಯಾಯ್ತು ಎಂದು ವರನ ಕಡೆಯವರು ತಗಾದೆ ತೆಗೆದಿದ್ದರು ಎಂದು ಆರೋಪಿಸಲಾಗಿದೆ.

 
ಇದೇ ಕಾರಣಕ್ಕೆ ವರ ಮಹಾಶಯ ನಾಗೇಂದ್ರ ಪ್ರಸಾದ್ ಮದುವೆ ಬೇಡವೆಂದು ಛತ್ರ ಬಿಟ್ಟು ಹೊರ ನಡೆದ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಆದರೆ ನಂತರ ಪರಸ್ಪರ ಕೆಸರೆರಚಾಟ ಮಾಡಿಕೊಂಡ ಉಭಯ ಕಡೆಯವರು, ಮದುವೆ ಮುರಿಯಲು ಅವರೇ  ಕಾರಣ ಎಂದು ಮಾಧ್ಯಮಗಳ ಮುಂದೆ ಗುದ್ದಾಡಿಕೊಂಡರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿ.ಕೆ. ಸುರೇಶ್‌ಗೆ ಇಡಿ ಶಾಕ್‌: ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌

ತಂದೆಯ ನಿರ್ಲಕ್ಷ್ಯಕ್ಕೆ ಮಗು ಬಲಿ: ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ ಕಂದಮ್ಮ ಸಾವು

ಸಿಎಂ ಮನೆಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ನಾಯಕರ ಬಂಧನ

ವಿಮಾನ ದುರಂತ: 135 ಮೃತದೇಹಗಳ ಗುರುತು ಪತ್ತೆ, ಇನ್ನೂ 135 ಶವಗಳ ಗುರುತು ಪತ್ತೆಗಾಗಿ ಪ್ರಕ್ರಿಯೆ ಚುರುಕು

ಗೋದ್ರಾ ದುರಂತದಲ್ಲಿ ಸತ್ರು, ಕುಂಬಮೇಳದಲ್ಲಿ ಸತ್ರು ಮೋದಿ ರಾಜೀನಾಮೆ ಕೇಳಿದ್ವಾ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments