Webdunia - Bharat's app for daily news and videos

Install App

ಮಾರಮ್ಮ ದೇವಿಯ ವಿಷ ಪ್ರಸಾದ ಪ್ರಕರಣ; ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ

Webdunia
ಶನಿವಾರ, 15 ಡಿಸೆಂಬರ್ 2018 (11:21 IST)
ಚಾಮರಾಜನಗರ : ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ಲೋಕೆಶ್ ,’ನನ್ನ ತಂದೆ ಈ ದೇವಾಲಯದ ಟ್ರಸ್ಟ್ ಆಗಿದ್ದರು. ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ. ಬ್ರಹ್ಮೇಶ್ವರಿ ದೇವಾಲಯದ ಕೆಲವರು ವಿಷ ಹಾಕಿರಬಹುದು. 10 ಜನ ಸದಸ್ಯರೊಂದಿಗೆ ದೇಗುಲದ ಲೆಕ್ಕ ಪತ್ರ ನೋಡಿಕೊಳ್ಳುತ್ತಿದ್ದರು. ತಮಿಳುನಾಡಿನ  ಬ್ರಹ್ಮೇಶ್ವರಿ ದೇವಾಲಯದ ಟ್ರಸ್ಟಿ ಕಾಳಪ್ಪನವರಿಗು ನಮ್ಮ ತಂದೆಯವರಿಗೂ ಆಗುತ್ತಿರಲಿಲ್ಲ.  ಅವರು ನಮ್ಮನ್ನು ಕೊಲ್ಲಲು ವಿಷ ಹಾಕಿದ್ದಾರೆ. ಆದ್ರೆ ನಾವು ತಿಂದಿರಲಿಲ್ಲ. ಓಂ ಶಕ್ತಿಗೆ ಬಂದಿದ್ದ 200 ಮಂದಿಗೆ ಬೆಳಿಗ್ಗೆಯೂ ಪ್ರಸಾದ ವಿತರಿಸಿದ್ದೆವು. ಆದ್ರೆ 8.30ರ ವೇಳೆ ಪ್ರಸಾದ ತಿಂದು ಅವರೆಲ್ಲ ಅಸ್ವಸ್ಥರಾದರು. ನಾವು ತಿಂದು ಸಾಯಬೇಕಿದ್ದ ಆಹಾರವನ್ನು ಅವರು ತಿಂದರು ಎಂದು ಹೇಳಿದ್ದಾರೆ.


‘ಇದಕ್ಕೆಲ್ಲಾ ಬೆಟ್ಟದ ಮೇಲಿರುವ ಇಮ್ಮಡಿ ಮಹಾದೇವಸ್ವಾಮಿ ಕಾರಣ. ಅವರೂ ಸಹ ನನ್ನ ತಂದೆ ಮೇಲೆ ದ್ವೇಷ ಸಾಧಿಸುತ್ತಿದ್ದರು. ದೇವಾಲಯಕ್ಕೆ ಬಂದ ಎಲ್ಲಾ ಹಣವನ್ನು ಅವರ ಅಕೌಂಟ್ ಗೆ ಹಾಕಲಾಗುತ್ತಿತ್ತು. ಆದ್ರೆ ಗೋಪುರ ಕಟ್ಟಲು ನಮ್ಮ ತಂದೆ ಮುಂದಾಳತ್ವ ವಹಿಸದ್ದೇ ಕಾರಣ. ಇದಕ್ಕೆ ಅವರು ನನ್ನ ತಂದೆ ಹಾಗೂ ನಮ್ಮನ್ನೆಲ್ಲ ಕೊಲ್ಲಲು ವಿಷ ಹಾಕಿದ್ದಾರೆ’ ಎಂದು ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ಲೋಕೆಶ್ ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಅರ್ಜುನ್ ಜನ್ಯಾ, ಹಂಸಲೇಖ ಸೇರಿದಂತೆ ಸಂಗೀತ ನಿರ್ದೇಶಕರಿಗೆ ಪತ್ರ ಬರೆದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments