Webdunia - Bharat's app for daily news and videos

Install App

ಸತ್ತ ವ್ಯಕ್ತಿ ಎದ್ದು ಕೂತ; ದಿಕ್ಕಾಪಾಲಾಗಿ ಓಡಿದ ಜನರು

Webdunia
ಗುರುವಾರ, 23 ಫೆಬ್ರವರಿ 2017 (12:23 IST)
ಶವಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಸತ್ತವ್ಯಕ್ತಿ ಎದ್ದು ಕುಳಿತ ಪವಾಡಸದೃಶ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಮದನಿಂಗನಾಳ ಗ್ರಾಮದಲ್ಲಿ ನಡೆದಿದೆ.
 
ಈ  ಪವಾಡಸದೃಶ ಘಟನೆಗೆ ಸಾಕ್ಷಿಯಾದ ವ್ಯಕ್ತಿಯ ಹೆಸರು ನಿಂಗಪ್ಪ( 54) . 
 
ಕಳೆದ ಫೆಬ್ರವರಿ 16 ರಂದು ನಿಂಗಪ್ಪನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದ ವೈದ್ಯರು ಎರಡು ದಿನ ತೀವ್ರ ನಿಗಾ ಘಟಕದಲ್ಲಿಟ್ಟಿದ್ದರು. ಆದರೆ ಆಗ ಕೋಮಾ ಸ್ಥಿತಿಗೆ ತಲುಪಿದ್ದ ನಿಂಗಪ್ಪ ಸುಧಾರಿಸಿಕೊಳ್ಳುವ ಲಕ್ಷಣವನ್ನು ತೋರಲಿಲ್ಲ. ಹೀಗಾಗಿ ವೈದ್ಯರು ಒಂದು ಗಂಟೆ ಬದುಕುವುದು ಜಾಸ್ತಿ. ಮನೆಗೊಯ್ಯಿರಿ ಎಂದಿದ್ದಾರೆ. ಅಂಬುಲೆನ್ಸ್‌ನಲ್ಲಿ ಅವರನ್ನು ಮನೆಗೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅವರ ಉಸಿರಾಟ ನಿಂತಿದ್ದು, ಅಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
 
ಫೆಬ್ರವರಿ 19 ರಂದು ಮನೆ ಮುಂದೆ ಅವರ ದೇಹವನ್ನಿಟ್ಟುಕೊಂಡು ಸಂಪೂರ್ಣ ರಾತ್ರಿ ಭಜನೆಯನ್ನು ನಡೆಸಲಾಗಿದೆ. ರಾತ್ರಿ ಎಲ್ಲ ಮಿಸುಕಾಡದ ನಿಂಗಪ್ಪ ಫೆಬ್ರವರಿ 20 ರ ಬೆಳಗಿನ ಜಾವ 4ಗಂಟೆ ಸುಮಾರಿಗೆ ಏಕಾಏಕಿ ಎದ್ದು ಕುಳಿತಿದ್ದಾರೆ. ಇದರಿಂದ ಬೆದರಿದ ಜನರು ಎದ್ನೋ ಬಿದ್ನೋ ಎಂದು ಅಲ್ಲಿಂದ ಓಟಕ್ಕಿತ್ತಿದ್ದಾರೆ.
 
ಮತ್ತೀಗ ನಿಂಗಪ್ಪ ಆರಾಮಾಗಿ ಓಡಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments