Webdunia - Bharat's app for daily news and videos

Install App

ನಾಲ್ಕನೆಯ ಮದುವೆಗೆ ತಯಾರಿ: ಗ್ರಹಚಾರ ಬಿಡಿಸಿದ ಪ್ರಿಯತಮೆ

Webdunia
ಶುಕ್ರವಾರ, 24 ಜೂನ್ 2016 (11:17 IST)
ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕನೆಯ ಮದುವೆಯಾಗ ಹೊರಟ ವಂಚಕನಿಗೆ ಐದನೆಯ ಹುಡುಗಿ ಅಂದರೆ ಆತನ ಗರ್ಲ್ ಫ್ರೆಂಡ್ ಮತ್ತು ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ. 
 
ಆರೋಪಿ ವಜ್ರೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೆಯ ಮದುವೆಯಾಗಿದ್ದ. ಆಕೆಯನ್ನು ಸಹ ತೊರೆದು ಮೂರನೆಯವಳನ್ನು ಕಟ್ಟಿಕೊಂಡಿದ್ದ. ಈಗ ಅವಳನ್ನು ದೂರ ಮಾಡಿ ನಾಲ್ಕನೆಯವಳನ್ನು ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆತನ ಗರ್ಲ್ ಫ್ರೆಂಡ್ ಶೈಲಜಾ ಈ ಕುರಿತು ವಿಚಾರಿಸಲು ತೆರಳಿದಾಗ ಆತ ಅವಳಿಗೆ ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದ. ಆಗ ಆಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.
 
ಇತ್ತ ನಾಲ್ಕನೆಯ ಮದುವೆಗೆ ಸಿದ್ಧತೆ ಭರದಿಂದ ಸಾಗುತ್ತಿದ್ದಂತೆ ಮತ್ತೆ ಇಂದು ಆತನ ಮನೆಗೆ ಬಂದ ಪ್ರಿಯತಮೆ ತನ್ನ ಸಂಬಂಧಿಕರ ಜತೆ ಬಂದ ಮನಬಂದಂತೆ ಥಳಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾಳೆ. 
 
ಬರೊಬ್ಬರಿ ಐದು ಹುಡುಗಿಯರಿಗೆ ಪ್ರೀತಿ, ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಕೀಚಕ ಈಗ ಕಂಬಿ ಎಣಿಸುವಂತಾಗಿದೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments