Webdunia - Bharat's app for daily news and videos

Install App

ಹೃದಯವಿದ್ರಾವಕ: ದಾರುಣ ಅಂತ್ಯ ಕಂಡ ಸಂಪೂರ್ಣ ಕುಟುಂಬ

Webdunia
ಮಂಗಳವಾರ, 28 ಫೆಬ್ರವರಿ 2017 (08:28 IST)
ಪತ್ನಿ ಮತ್ತು ಮಗುವಿಗೆ ವಿಷ ಉಣಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಸಂಪೂರ್ಣ ಕುಟುಂಬ ದಾರುಣವಾಗಿ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಯಲಹಂಕದ ಸೋಮೇಶ್ವರ ನಗರದಲ್ಲಿ ಈ ಹೇಯ ಕೃತ್ಯ ನಡೆದಿದ್ದು ಮೃತರನ್ನು ಅಮಿತ್ ಕುಮಾರ್ ಝಾ, ಪತ್ನಿ ಮೀನಾಕ್ಷಿ ಝಾ ಮತ್ತು ಪುತ್ರಿ ಮಾನ್ಯ(3) ಎಂದು ಗುರುತಿಸಲಾಗಿದೆ.
 
ದಂಪತಿ ಬಿಟೆಕ್ ಪದವೀಧರರಾಗಿದ್ದು ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.
 
ಪತ್ನಿ ಮೀನಾಕ್ಷಿ ''ಶೆಮ್ ರಾಕ್'' ಎಂಬ ಪ್ರಿ ನರ್ಸರಿ ಶಾಲೆಯನ್ನು ನಡೆಸುತ್ತಿದ್ದು ಮದ್ಯವ್ಯಸನಿ ಪತಿ ನಿರುದ್ಯೋಗಿಯಾಗಿ ಓಡಾಡಿಕೊಂಡಿದ್ದ. ಹೀಗಾಗಿ ಪತಿ-ಪತ್ನಿ ಮಧ್ಯೆ ಆಗಾಗ ಜಗಳವಾಗುತಿತ್ತು. ಭಾನುವಾರ ಸಹ ಇಬ್ಬರ ಮಧ್ಯೆ ಜಗಳವಾಗಿದ್ದು ಕೋಫದ ಭರದಲ್ಲಿ ಅಮಿತ್ ಪತ್ನಿ  ಮತ್ತು ಪುತ್ರಿಯನ್ನು ಕೊಂದು ತಾನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 
ಸೋಮವಾರ ಮೀನಾಕ್ಷಿ ಶಾಲೆಗೆ ಬರದಿದ್ದಾಗ ಶಾಲೆಯ ಆಯಾ ಮನೆ ಬಳಿ ಬಂದು ಮಾಲೀಕರಿಗೆ ಈ ಕುರಿತು ತಿಳಿಸಿದ್ದಾಳೆ. ಕಿಟಕಿ ಮೂಲಕ ಒಳಗೆ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments