ಕೆಟಿಎಂ ಬೈಕ್ ಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಗೆಳೆತನ ಬೆಳೆಸಿಕೊಂಡು ಕೊನೆಗೆ ಸೈನೆಡ್ ಹಾಕಿ ಕೊಲೆಗೈದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಂಧಿತನನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು ಈತ ಆಗಸ್ಟ್ 4ರಂದು ಕಾಡುಗೋಡಿಯ ಶಾಂತಿನಿಕೇತನ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಟೆಕ್ಕಿ ಸೋಹನ್ ಅಲ್ದಾರ್ ಎಂಬಾತನನ್ನು ಅಮಾನುಷವಾಗಿ ಕೊಂದಿದ್ದ.
ಆಟೋಸ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಸೋಹನ್ ಅಲ್ದಾರ್ ತನ್ನ ಕೆಟಿಎಂ ಬೈಕ್ ಮಾರುವ ಸಲುವಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಕಾರ್ತಿಕ್, ಸೋಹನ್ ಜೊತೆ ಫೇಸ್ಬುಕ್ನಲ್ಲಿ ಸ್ನೇಹ ಸಂಪಾದಿಸಿದ. ಬಳಿಕ ಇಬ್ಬರ ನಡುವೆ ಬೈಕ್ಗೆ ಸಂಬಂಧಿಸಿದಂತೆ ಮಾತುಕತೆ, ಹಣ ವಿನಿಮಯವಾಗಿತ್ತು.
ಬೈಕ್ ಖರೀದಿಸುವ ನೆಪದಲ್ಲಿ ಸೋಹನ್ ವಾಸವಾಗಿದ್ದ ಅಪಾರ್ಟ್ಮೆಂಟ್ಗೆ ಬಂದ ಕಾರ್ತಿಕ್ ನಿದ್ರಿಸುತ್ತಿದ್ದ ಸೋಹನ್ ಬಾಯಿಗೆ ಸೈನೆಡ್ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಕಾರ್ತಿಕ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ