Webdunia - Bharat's app for daily news and videos

Install App

ಬೈಕ್‌ಗಾಗಿ ಸೈನೆಡ್ ಹಾಕಿ ಫೇಸ್‌ಬುಕ್ ಗೆಳೆಯನ ಕೊಲೆ

Webdunia
ಶುಕ್ರವಾರ, 12 ಆಗಸ್ಟ್ 2016 (08:44 IST)
ಕೆಟಿಎಂ ಬೈಕ್‍ ಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಗೆಳೆತನ ಬೆಳೆಸಿಕೊಂಡು ಕೊನೆಗೆ ಸೈನೆಡ್ ಹಾಕಿ ಕೊಲೆಗೈದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಬಂಧಿತನನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು ಈತ  ಆಗಸ್ಟ್ 4ರಂದು ಕಾಡುಗೋಡಿಯ ಶಾಂತಿನಿಕೇತನ್ ಅಪಾರ್ಟ್‍ಮೆಂಟ್‌ನಲ್ಲಿ ವಾಸವಾಗಿದ್ದ ಟೆಕ್ಕಿ ಸೋಹನ್ ಅಲ್ದಾರ್‍ ಎಂಬಾತನನ್ನು ಅಮಾನುಷವಾಗಿ ಕೊಂದಿದ್ದ.
 
ಆಟೋಸ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಸೋಹನ್ ಅಲ್ದಾರ್ ತನ್ನ ಕೆಟಿಎಂ ಬೈಕ್ ಮಾರುವ ಸಲುವಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಕಾರ್ತಿಕ್, ಸೋಹನ್ ಜೊತೆ ಫೇಸ್‍ಬುಕ್‍ನಲ್ಲಿ ಸ್ನೇಹ ಸಂಪಾದಿಸಿದ. ಬಳಿಕ ಇಬ್ಬರ ನಡುವೆ ಬೈಕ್‌ಗೆ ಸಂಬಂಧಿಸಿದಂತೆ ಮಾತುಕತೆ, ಹಣ ವಿನಿಮಯವಾಗಿತ್ತು. 
 
ಬೈಕ್ ಖರೀದಿಸುವ ನೆಪದಲ್ಲಿ ಸೋಹನ್ ವಾಸವಾಗಿದ್ದ ಅಪಾರ್ಟ್‍ಮೆಂಟ್‍‌ಗೆ ಬಂದ ಕಾರ್ತಿಕ್ ನಿದ್ರಿಸುತ್ತಿದ್ದ ಸೋಹನ್ ಬಾಯಿಗೆ ಸೈನೆಡ್ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.
 
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಕಾರ್ತಿಕ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments