Webdunia - Bharat's app for daily news and videos

Install App

ಸಹೋದರಿ,ಆಕೆಯ ಪತಿಯನ್ನು ಹತ್ಯೆ ಮಾಡಿದ ಆರೋಪಿ ಸಹೋದರನ ಬಂಧನ

Webdunia
ಮಂಗಳವಾರ, 7 ಜುಲೈ 2015 (16:37 IST)
ಪೋಷಕರಿಗೆ ವಿರೋಧವಾಗಿ ವಿವಾಹವಾಗಿದ್ದ ಸಹೋದರಿ ಹಾಗೂ ಆಕೆಯ ಪತಿಯನ್ನು ಕ್ರೂರವಾಗಿ ಹತ್ಯೆಗೈದ 27 ವರ್ಷ ವಯಸ್ಸಿನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
 
ಕೊಪ್ಪಳ ಜಿಲ್ಲೆಯವರಾದ ಕಸ್ತೂರಿ ಮತ್ತು ಬಸವರಾಜ್ ಶಾಲಾ ದಿನಗಳಿಂದಲೇ ಪರಸ್ಪರ ಆಕರ್ಷಿತರಾಗಿದ್ದರು. ಕಸ್ತೂರಿಯನ್ನು ಆಕೆಯ ಪೋಷಕರು ಬೇರೆಯೊಬ್ಬನಿಗೆ ಕೊಟ್ಟ ವಿವಾಹ ಮಾಡಿದ್ದರು. ಆದರೆ, ವಿವಾಹದ ನಂತರ ಓಡಿ ಹೋದ ಕಸ್ತೂರಿ, ಪ್ರಿಯತಮ ಬಸವರಾಜ್‌ನೊಂದಿಗೆ ವಿವಾಹವಾಗಿ ಹೆಸರಘಟ್ಟದಲ್ಲಿರುವ ವಿನಾಯಕನಗರದಲ್ಲಿ ವಾಸವಾಗಿದ್ದಳು  
 
ಕಳೆದ ರವಿವಾರದಂದು ದಂಪತಿಗಳನ್ನು ಕ್ರೂರವಾಗಿ ಹತ್ಯೆಗೈಯಲಾಗಿತ್ತು. ಆರೋಪಿ ಕಸ್ತೂರಿಯ ಸಹೋದರ ಹನುಮಂತರಾಯಪ್ಪ ಈ ಕೃತ್ಯ ಎಸಗಿದ್ದಾನೆ ಎಂದು ಮನೆಯ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ.
 
ಆರೋಪಿ ಹನುಮಂತರಾಯಪ್ಪ ರವಿವಾರದಂದು ಸಹೋದರಿ ಕಸ್ತೂರಿಯ ಮನೆಗೆ ಬಂದಿರುವುದನ್ನು ಮನೆಯ ಮಾಲೀಕರು ಹಾಗೂ ನೆರೆಹೊರೆಯವರು ನೋಡಿದ್ದಾರೆ. ಪೊಲೀಸರಿಗೆ ಹನುಮಂತರಾಯಪ್ಪನ ಬಗ್ಗೆ ಮಾಹಿತಿ ನೀಡಿದ್ದಾರೆ. 
 
ದೊಡ್ಡಬಳ್ಳಾಪುರದ ಸಂಬಂಧಿಗಳ ಮನೆಯಲ್ಲಿ ಅಡಗಿದ್ದ ಹನುಮಂತರಾಯಪ್ಪನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ಸಹೋದರಿ ಕಸ್ತೂರಿ ಬಸವರಾಜುನೊಂದಿಗೆ ಓಡಿಹೋಗಿದ್ದರಿಂದ ಸೇಡು ತೀರಿಸಿಕೊಳ್ಳಲು ಬಯಸಿದ್ದ. ವಿನಾಯಕ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಹನುಮಂತರಾಯಪ್ಪ, ಬಸವರಾಜುವಿಗೆ ಕಸ್ತೂರಿಯನ್ನು ಬಿಡುವಂತೆ ಮನವಿ ಮಾಡಿದ್ದ. ಆದರೆ, ದಂಪತಿಗಳು ಅದನ್ನು ನಿರಾಕರಿಸಿದ್ದಾರೆ. ರಾತ್ರಿ ಸಹೋದರಿ ಕಸ್ತೂರಿ ಮತ್ತು ಆಕೆಯ ಪತಿ ಬಸವರಾಜು ಮಲಗಿದ್ದಾಗ ಹನುಮಂತರಾಯಪ್ಪ ಭೀಕರವಾಗಿ ದಂಪತಿಗಳನ್ನು ಹತ್ಯೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments