Webdunia - Bharat's app for daily news and videos

Install App

ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಥಳಿತ

Webdunia
ಸೋಮವಾರ, 20 ಏಪ್ರಿಲ್ 2015 (21:20 IST)
ಮಹಿಳಾ ಶೌಚಾಲಯದೊಳಗೆ ನುಗ್ಗಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನದ ಬಸ್ ​ನಿಲ್ದಾಣದಲ್ಲಿ ನಡೆದಿದೆ. ಬಿಟ್ಟಗೋಡನಹಳ್ಳಿಯ ನಾಗರಾಜು, ಸಾರ್ವಜನಿಕರಿಂದ ಗೂಸಾ ತಿಂದ ಕಾಮುಕ.

ಈತ ಪ್ಲಾಟ್​ಫಾರಂ 7 ರಲ್ಲಿ ಸುಮ್ಮನೆ ಕುಳಿತಿದ್ದು, ಬಸ್ ಇಳಿದು ಶೌಚಾಲಯದೊಳಗೆ ಹೋದ ಮಹಿಳೆಯನ್ನು ಹಿಂಬಾಲಿಸಿ, ಶೌಚಾಲಯದೊಳಗೆ ಆತನೂ ನುಗ್ಗಿದ್ದ. ನಂತರ ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆ ಜಮಾವಣೆಗೊಂಡ ಬಸ್ ಪ್ರಯಾಣಿಕರು, ಸಾರ್ವಜನಿಕರು ಆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದರು.

ಆದರೆ ಆತ ಮಾತ್ರ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿಲ್ಲ ಅಂತ ಸಮರ್ಥಿಸಿಕೊಳ್ಳುತ್ತಿದ್ದ. ಗೊತ್ತಾಗದೇ ಮಹಿಳಾ ಶೌಚಾಲಯದೊಳಗೆ ಹೋಗಿದ್ದಾಗಿ ಅಹಂಕಾರದಿಂದ ಸಾರ್ವಜನಿಕರಿಗೆ ಉತ್ತರ ನೀಡಿದ. ಬಡಾವಣೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ ಸಾರ್ವಜನಿಕರು ಪೊಲೀಸರಿಗೆ ಆತನನ್ನು ಒಪ್ಪಿಸಿದರು.

ಮಫ್ತಿಯಲ್ಲಿ ಬೈಕ್​ನಲ್ಲಿ ಬಂದ ಪೊಲೀಸರ ಜೊತೆ ಠಾಣೆಗೆ ಹೋಗಲು ಆತ ನಿರಾಕರಿಸಿದ. ನಂತರ ಬಲವಂತವಾಗಿ ಆತನನ್ನು ಆಟೋದಲ್ಲಿ ಕೂರಿಸಿ ಠಾಣೆಗೆ ಕರೆದೊಯ್ಯಲಾಯಿತು. ಬಡಾವಣೆ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments