Webdunia - Bharat's app for daily news and videos

Install App

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

Krishnaveni K
ಶುಕ್ರವಾರ, 27 ಜೂನ್ 2025 (18:52 IST)
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಅರಣ್ಯ ವಲಯದಲ್ಲಿ ಸಾವನ್ನಪ್ಪಿದ ಐದು ಹುಲಿಗಳ ಹಿಂದೆ ಧ್ವೇಷದ ಕಹಾನಿಯಿದೆ ಎನ್ನಲಾಗುತ್ತಿದೆ. ಹುಲಿಗಳಿಗೆ ವಿಷ ಪ್ರಾಷನ ಮಾಡಿರುವುದು ಖಚಿತವಾದ ಬೆನ್ನಲ್ಲೇ ಈಗ ಮತ್ತಷ್ಟು ವಿಚಾರಗಳು ಬಯಲಾಗುತ್ತಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹ್ಯೂಗಂ ವಲಯದಲ್ಲಿ ಐದು ಹುಲಿಗಳು ವಿಷಪ್ರಾಷನದಿಂದ ಏಕಕಾಲಕ್ಕೆ ಸಾವನ್ನಪ್ಪಿವೆ ಎನ್ನಲಾಗಿದೆ. ಸದ್ಯಕ್ಕೆ ಹುಲಿಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಪ್ರಾಥಮಿಕ ತನಿಖೆಯಿಂದ ವಿಷಪ್ರಾಷನವಾಗಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಇದೀಗ ಹುಲಿಗಳ ಅಂಗಾಂಗ ಪರೀಕ್ಷೆ ನಡೆಸಲಾಗುತ್ತಿದೆ.

ಅಷ್ಟಕ್ಕೂ ಹುಲಿಗಳನ್ನು ಹೀಗೆ ಏಕಾಏಕಿ ಸಾಮೂಹಿಕವಾಗಿ ವಿಷ ಹಾಕಿ ಸಾಯಿಸಿರುವುದಕ್ಕೆ ಕಾರಣವೇನು ಎಂದು ಹುಡುಕುತ್ತಾ ಹೋದರೆ ಕಳೆದ ಒಂದು ತಿಂಗಳಲ್ಲಿ ನಡೆದ ಎರಡು ದುರಂತಗಳು ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಹುಲಿ ದಾಳಿಯಿಂದ ಸಾವನ್ನಪ್ಪಿದ್ದವು.

ಹೀಗಾಗಿ ಗ್ರಾಮಸ್ಥರೇ ವಿಷ ಹಾಕಿ ಹುಲಿಗಳನ್ನು ಸಾಯಿಸಿ ಸೇಡು ತೀರಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಬಿಳಿರಂಗನಬೆಟ್ಟ ಬಳಿ ರಂಗಮ್ಮ ಎಂಬ ವೃದ್ಧೆ ಮತ್ತು ಪುಟ್ಟಮ್ಮ ಎನ್ನುವ ಇನ್ನೋರ್ವ ಮಹಿಳೆ ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಹೀಗಾಗಿ ಈ ದಾಳಿಗೆ ಗ್ರಾಮಸ್ಥರೇ ಕಾರಣವಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

ಭಾರತದಲ್ಲಿ ಇನ್ನು ಗಗನಯಾತ್ರೆಗೂ ಮೀಸಲಾತಿ ಬೇಕಂತೆ

ಅಂತಹ ಹೇಳಿಕೆಯನ್ನು ನಿರ್ಲಕ್ಷಿಸಿ: ರಾಜಣ್ಣ ಹೇಳಿಕೆಯನ್ನು ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ

ವಾಹನಕ್ಕೆ ಸಿಲುಕಿ ಬೆಂಬಲಿಗ ಸಾವು: ಜಗನ್ ಮೋಗನ್‌ ರೆಡ್ಡಿಗೆ ಆಂಧ್ರದಿಂಧ ಬಿಗ್‌ ರಿಲೀಫ್‌

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ

ಮುಂದಿನ ಸುದ್ದಿ
Show comments