Select Your Language

Notifications

webdunia
webdunia
webdunia
webdunia

ಚಂದ್ರು ನಿರ್ದೇಶನದ 'ಮಳೆ' ಎಪ್ರಿಲ್‌ನಲ್ಲಿ ತರೆಗೆ ?!

ಚಂದ್ರು ನಿರ್ದೇಶನದ 'ಮಳೆ' ಎಪ್ರಿಲ್‌ನಲ್ಲಿ ತರೆಗೆ ?!
, ಬುಧವಾರ, 1 ಏಪ್ರಿಲ್ 2015 (10:29 IST)
ಆರ್ ಚಂದ್ರು ನಿರ್ಮಾಣದ ತೇಜಸ್ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಮಳೆ. ಈ ಚಿತ್ರ ಈ ತಿಂಗಳಲ್ಲಿ ಬಿಡುಗಡೆ ಆಗಲು ಸಂಪೂರ್ಣ ಸಿದ್ಧತೆ ನಡೆಸಿದೆ. ಇದಕ್ಕೆಂದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಚಿತ್ರತಂಡ ಚೆನ್ನೈ ಕಡೆಗೆ ಹೋಗಲಿದೆ. ಅಮೂಲ್ಯ, ಪ್ರೇಂ ಕುಮಾರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 
ದರ್ಶನ್ ಮತ್ತು ಸುನೀಲ್ ಅವರು ಪ್ರೇಂ ಕುಮಾರ್ ಸ್ನೇಹಿತರಾಗಿದ್ದಾರೆ. ಕನ್ನಡ  ಧಾರವಾಹಿ ಅಮೃತ ವರ್ಷಿಣಿ ಯಿಂದ ಹಿರಿತೆರೆಗೆ ಬರಲು ಅವಕಾಶ ಮಾಡಿಕೊಟ್ಟ ಆರ್ ಚಂದ್ರು ಅವರ ಬಗ್ಗೆ  ಸಕತ್ ಅಭಿಮಾನ ಹೊಂದಿದ್ದಾರೆ ದರ್ಶನ್. ಸುನಿಲ್ ಸಹ  ಚಿತ್ರರಂಗಕ್ಕೆ ಹೊಸಬ. ಆತ ಹದಿನೈದು ದಿನಗಳ ಕಾಲ  ಚಿತ್ರೀಕರಣದಲ್ಲಿ ಭಾಗವಹಿಸಿ ತಮ್ಮ ಅನುಭವ ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರದ ನಿನದೆ ಪುಸ್ತಕ ಹಾಡು ಯು ಟೂಬ್‌ನಲ್ಲಿ 70ಸಾವಿರ ವೀಕ್ಷಕರನ್ನು ಹೊಂದಿದೆಯಂತೆ. ಆ ಬಗ್ಗೆ ನಿರ್ದೇಶಕ ತೇಜಸ್ ಖುಷಿಯಿಂದ ಹೇಳಿದ್ದಾರೆ. 
 
ರನ್ನ ಮತ್ತು ರಣವಿಕ್ರಮ ಚಿತ್ರಗಳು ಎಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಬಿಡುಗಡೆ ಆಗುತ್ತಿರುವ ಕಾರಣದಿಂದ ಮಳೆಗೆ ಸಮಯ ಹುಡುಕ ಬೇಕಿದೆ. ಈ ಚಿತ್ರ ಎಪ್ರಿಲ್ ತಿಂಗಳ ಕೊನೆ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ತೇಜಸ್. ಒಟ್ಟಾರೆ ಎಪ್ರಿಲ್ ತಿಂಗಳು ಸುದೀಪ್, ಪುನೀತ್, ಪ್ರೇಂ ಕುಮಾರ್ ಅಭಿಮಾನಿಗಳ ಸುಗ್ಗಿಕಾಲ. 

Share this Story:

Follow Webdunia kannada