Select Your Language

Notifications

webdunia
webdunia
webdunia
webdunia

ಮಹದಾಯಿ ತೀರ್ಪಿಗೆ ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ: ಅಶೋಕ ಪಟ್ಟಣ

ಮಹದಾಯಿ ತೀರ್ಪಿಗೆ ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ: ಅಶೋಕ ಪಟ್ಟಣ
ಬೆಂಗಳೂರು , ಶುಕ್ರವಾರ, 29 ಜುಲೈ 2016 (10:42 IST)
ಮಹದಾಯಿ ಮಧ್ಯಂತರ ತೀರ್ಪಿಗೆ ನೊಂದು ರಾಮದುರ್ಗ ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರೈತರ ಜೊತೆ ಸೇರಿ ಹೋರಾಟ ನಡೆಸಲು ಮುಂದಾಗಿದ್ದಾರೆ.
 
ಮಹದಾಯಿ ನ್ಯಾಯಧಿಕರಣದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಜೊತೆ ನನ್ನ ಬೆಂಬಲಿಗರು ರಾಜೀನಾಮೆ ನೀಡುತ್ತಾರೆ ಎಂದು ತಿಳಿಸಿದರು.
 
ಅಶೋಕ ಪಟ್ಟಣ ಅವರ ಬೆಂಬಲಿಗರಾದ ಇಬ್ಬರು ಜಿಲ್ಲಾ ಪಂಚಾಯತ್ ಸದಸ್ಯರು, 9 ತಾಲೂಕು ಪಂಚಾಯತ್ ಸದ್ಯಸ್ಯರು ಸೇರಿದಂತೆ 28 ಗ್ರಾಮ ಪಂಚಾಯತ್ ಸದಸ್ಯರಿಂದಲೂ ರಾಜೀನಾಮೆ ಕೊಡಿಸಿ, ರೈತರ ಜೊತೆ ಸೇರಿ ಬೀದಿಗಿಳಿದು ಹೋರಾಟ ನಡೆಸುವುದುಗಿ ತಿಳಿಸಿದ್ದಾರೆ.
 
ತಮ್ಮ ರಾಜೀನಾಮೆ ಪತ್ರವನ್ನು ತಹಶೀಲ್ದಾರ ಅವರ ಮೂಲಕ ಸಭಾಪತಿ ಕೆ.ಬಿ.ಕೋಳಿವಾಡ ಅವರಿಗೆ ರವಾನಿಸಲು ನಿರ್ಧರಿಸಲಾಗಿದೆ ಎಂದು ರಾಮದುರ್ಗ ಶಾಸಕ ಹಾಗೂ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಿಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧರಣಿ ಹೆಸರಿನಲ್ಲಿ ಆಸ್ತಿ ಪಾಸ್ತಿ ನಷ್ಟವಾದರೆ ನೀವೆ ಹೊಣೆ: ಅಧಿಕಾರಿಗೆ ಗೃಹ ಸಚಿವರ ತರಾಟೆ