Select Your Language

Notifications

webdunia
webdunia
webdunia
webdunia

ಮಡಿವಾಳ ಠಾಣೆ ಇನ್ಸ್‌ಪೆಕ್ಟರ್ ಅಮಾನತು, ಇಬ್ಬರು ಪೇದೆಗಳ ಬಂಧನ

ಮಡಿವಾಳ ಠಾಣೆ ಇನ್ಸ್‌ಪೆಕ್ಟರ್ ಅಮಾನತು, ಇಬ್ಬರು ಪೇದೆಗಳ ಬಂಧನ
ಬೆಂಗಳೂರು , ಶುಕ್ರವಾರ, 19 ಸೆಪ್ಟಂಬರ್ 2014 (12:42 IST)
ಕರ್ತವ್ಯಲೋಪ ಆರೋಪದಡಿ ಮಡಿವಾಳ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರನ್ನು ಅಮಾನತು ಮಾಡಲಾಗಿದ್ದು, ಲಂಚ ಸ್ವೀಕರಿಸಿದ ಆರೋಪದ ಮೇಲೆ  ಮಡಿವಾಳ ಠಾಣೆ ಪೇದೆಗಳಾದ ಶ್ರೀಧರ್ ಮತ್ತು ನರಸಿಂಹ ಎಂಬವರನ್ನು ಬಂಧಿಸಲಾಗಿದೆ.  ಮಡಿವಾಳ ಕೆರೆ ಬಳಿ ಕುಳಿತಿದ್ದ  ಟೆಕ್ಕಿ ದಂಪತಿಯನ್ನು ಪೊಲೀಸ್ ಠಾಣೆಗೆ ಬರುವಂತೆ ಇಬ್ಬರು ಪೇದೆಗಳು ಕರೆದಾಗ ಅವರು ನಿರಾಕರಿಸಿದರು. ನಂತರ ಅವರಿಂದ ಬಲವಂತವಾಗಿ 350 ರೂ. ವಸೂಲಿ ಮಾಡಿ ಬಿಟ್ಟಿದ್ದರು.

ಯುವಕ ನಂತರ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅವರ ದೂರಿಗೆ ಸರಿಯಾಗಿ ಸ್ಪಂದಿಸಿರಲಿಲ್ಲ. ಈ ವಿಷಯವನ್ನು ಯುವಕ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿಯವರಿಗೆ ದೂರು ನೀಡಿದ ಬಳಿಕ ಡಿಸಿಪಿ ರೋಹಿಣಿ ನೇತೃತ್ವದಲ್ಲಿ ಆಯುಕ್ತರು ತನಿಖೆ ನಡೆಸಿದಾಗ ನಿಜ ಸಂಗತಿ ಬಯಲಿಗೆ ಬಂದಿದೆ.

ಕರ್ತವ್ಯಲೋಪದ ಆರೋಪದ ಮೇಲೆ ಮಡಿವಾಳ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರನ್ನು ಅಮಾನತುಗೊಳಿಸಿದ್ದು ಪೇದೆಗಳಾದ ಶ್ರೀಧರ್, ನರಸಿಂಹ ಎಂಬಿಬ್ಬರನ್ನು ಬಂಧಿಸಲಾಗಿದೆ. 

Share this Story:

Follow Webdunia kannada