Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿನ ಬಿಗುವಿನ ವಾತಾವರಣಕ್ಕೆ ಕಾಂಗ್ರೆಸ್, ಬಿಜೆಪಿ ಕಾರಣ: ದೇವೇಗೌಡ

ರಾಜ್ಯದಲ್ಲಿನ ಬಿಗುವಿನ ವಾತಾವರಣಕ್ಕೆ ಕಾಂಗ್ರೆಸ್, ಬಿಜೆಪಿ ಕಾರಣ: ದೇವೇಗೌಡ
ಬೆಂಗಳೂರು , ಶುಕ್ರವಾರ, 13 ನವೆಂಬರ್ 2015 (15:16 IST)
ರಾಜ್ಯದಲ್ಲಿನ ಬಿಗುವಿನ ವಾತಾವರಣಕ್ಕೆ ಕಾಂಗ್ರೆಸ್, ಬಿಜೆಪಿ ನೇರ ಕಾರಣವಾಗಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
 
ರಾಜ್ಯದಲ್ಲಿ ಅಡಳಿತರೂಢವಾಗಿರುವ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿರುವುದು ಮೊದಲ ತಪ್ಪು. ಅದನ್ನು ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿ ಜನಜೀವನ ಅಸ್ತವ್ಯಸ್ಥಗೊಳಿಸಿರುವುದು ಬಿಜೆಪಿಯ ಎರಡನೇ ತಪ್ಪು ಎಂದು ಗುಡುಗಿದ್ದಾರೆ.
 
ರಾಜ್ಯದಾದ್ಯಂತ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಹೊರಬೇಕಾಗುತ್ತದೆ. ಯಾವ ಪುರುಷಾರ್ಥಕ್ಕಾಗಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
 
ಹಲವಾರು ಜಿಲ್ಲೆಗಳಲ್ಲಿ ಜನತೆ ಬಿಜೆಪಿ ಮತ್ತು ವಿಎಚ್‌ಪಿ ಪ್ರತಿಭಟನೆಗಳಿಂದ ತೊಂದರೆ ಎದುರಿಸುತ್ತಿದ್ದಾರೆ. ಉಭಯ ಪಕ್ಷಗಳು ಜನತೆಯ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada