ಹುಚ್ಚು ನಾಯಿಗಳು ಕಚ್ಚಿ ಗಾಯಗೊಂಡ ಸುದ್ದಿ ಓದಿದ್ದೇವೆ. ಆದರೆ ಹುಚ್ಚು ಕುದುರೆ ಕಚ್ಚಿ ಗಾಯಗೊಳ್ಳುವುದು ಅಪರೂಪದ ವಿದ್ಯಮಾನ. ಆದರೆ ಮೈಸೂರು ಜಿಲ್ಲೆ ನಂಜನಗೂಡಿನ ಒಕ್ಕಲಗೇರಿಯಲ್ಲಿ ಹುಚ್ಚು ಕುದುರೆ ಕಚ್ಚಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ಮೈಸೂರಿನ ಸಾಂಕ್ರಾಮಿಕ ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಶುವೈದ್ಯರು ಕುದುರೆಯನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷೆ ನಡೆಸಿದ್ದಾರೆ. ಕಳೆದ ವಾರ ಹುಚ್ಚು ನಾಯಿಯೊಂದು ಕಚ್ಚಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರಿಂದ ಚುಚ್ಚುಮದ್ದು ನೀಡಲಾಗಿತ್ತು.