ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಅವರದು ಆತ್ಮಹತ್ಯೆ ಅಲ್ಲ.ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅದು ಕೊಲೆಯಾಗಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಗಣಪತಿ ಸಹೋದರ ಮಾಚಯ್ಯ ಆರೋಪಿಸಿದ್ದಾರೆ.
ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಜೆಎಂಎಫ್ ಕೋರ್ಟ್ನಲ್ಲಿ ಗಣಪತಿ ಸಹೋದರ ಮಾಚಯ್ಯ ಖಾಸಗಿ ದೂರನ್ನು ದಾಖಲಿಸಿದ್ದಾರೆ.
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಮೊಹಂತಿ ಮತ್ತು ಎಂ.ಎಂ ಪ್ರಸಾದ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿ ಎಂದು ಸಿಆರ್ಪಿಸಿ ಸೆಕ್ಷನ್ 20 ರ ಅಡಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಡಿವೈಎಸ್ಪಿ ಎಂ.ಕೆ.ಗಣಪತಿ ಸಹೋದರ ಮಾಚಯ್ಯ ನೀಡಿರುವ ಖಾಸಗಿ ದೂರಿನನ್ವಯ ಪರಿಶೀಲನೆ ನಡೆಸಿರುವ ಮಡಿಕೇರಿ ಜೆಎಂಎಫ್ ಕೋರ್ಟ್ ಜುಲೈ 18 ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಮಡಿಕೇರಿ ಜೆಎಂಎಫ್ ಕೋರ್ಟ್ನಲ್ಲಿ ದೂರು ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಚಯ್ಯ, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಗುಂಡು ಯಾಕೆ ಹಾರಿಸಿದ್ದಾರೆ. ಅವರ ಹಾಸಿಗೆಯ ಸುತ್ತ ಎರಡು ಮೂರು ಗಂಡುಗಳು ಹಾರಿರುವ ಸುಳಿವು ಸಿಕ್ಕಿದೆ. ಅವರು ವಾಸವಾಗಿದ್ದ ಲಾಡ್ಜ್ ಕೂಡ ಸೇಫ್ ಆಗಿರಲಿಲ್ಲ. ಲಾಡ್ಜ್ ಕಿಡಕಿಯ ಮೂಲಕ ಒಬ್ಬ ವ್ಯಕ್ತಿ ಬಂದು ಹೋಗುವಷ್ಟು ಅವಕಾಶ ಇತ್ತು. ಇದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋ ಸಂಶಯ ಮೂಡುತ್ತಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.