Webdunia - Bharat's app for daily news and videos

Install App

ಇದು ಅಂಬುಲೆನ್ಸ್‌ ಕಲ್ಯಾಣ ಕಥೆ

Webdunia
ಸೋಮವಾರ, 6 ಜೂನ್ 2016 (11:11 IST)
ಮದುವೆ ಪ್ರತಿಯೊಬ್ಬರ ಜೀವನದ ಮಹತ್ವದ ದಿನ. ಮದುವೆ ಕಲ್ಯಾಣ ಮಂಟಪದಲ್ಲೋ, ದೇವಸ್ಥಾನದಲ್ಲಿ, ವಿವಾಹ ನೋಂದಣಿ ಕಚೇರಿಯಲ್ಲೋ ನಡೆಯತ್ತೆ. ಆದರೆ ಚಿತ್ರದುರ್ಗದ ಪ್ರೇಮಿಗಳಿಬ್ಬರು ಅಂಬುಲೆನ್ಸ್‌ನಲ್ಲಿ ವಿವಾಹವಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಅವರು ಅಂಬುಲೆನ್ಸ್‌ನಲ್ಲಿ ಮದುವೆಯಾಗಿದ್ದು ಏಕೆ? ತಿಳಿಯಲು ಮುಂದೆ ಓದಿ. 

ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆಯ ನೇತ್ರಾವತಿ ಹಾಗೂ ಚಳ್ಳಕೆರೆಯ ಗುರುಸ್ವಾಮಿ ನಡುವೆ ಒಂದು ವರ್ಷದಿಂದ ಪ್ರೀತಿ ಪ್ರೇಮ ನಡೆಯುತ್ತಿತ್ತು. ಇಬ್ಬರು ಮೇ 22ರಂದು ಏಳು ಸುತ್ತಿನ ಕೋಟೆ ಕೋಟೆ ವೀಕ್ಷಣೆಗೆ ತೆರಳಿದ್ದರು. ದುರದೃಷ್ಟವಶಾತ್ ನೇತ್ರಾವತಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. 
 
ಘಟನೆ ನಡೆದಾಗಿನಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತನ್ನ ಪ್ರಿಯತಮೆ ಸ್ಥಿತಿಯಿಂದ ನೊಂದಿದ್ದ ಗುರುಸ್ವಾಮಿ ಶನಿವಾರ ಆಸ್ಪತ್ರೆಯಲ್ಲಿಯೇ ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಹಿರಿಯರು ಮುರುಘಾ ಮಠದಲ್ಲಿ ಮದುವೆ ಮಾಡುವುದೆಂದು ನಿಶ್ಚಯಿಸಿದರು, ನಿನ್ನೆ ಅವರ ಮದುವೆಗೆ ಮಹೂರ್ತವನ್ನು ನಿಗದಿ ಪಡಿಸಲಾಯ್ತು. 
 
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೇತ್ರಾವತಿಯನ್ನು ಅಂಬುಲೆನ್ಸ್‌ನಲ್ಲಿ ಮುರುಘಾ ಮಠಕ್ಕೆ ಕರೆತಂದು ವಿವಾಹ ನಡೆಸಲಾಯಿತು. ಆಂಬುಲೆನ್ಸ್‌ನಲ್ಲಿ ಮಲಗಿದ್ದ ನೇತ್ರಾವತಿ ಕೊರಳಿಗೆ ಮೂರು ಗಂಟು ಹಾಕಿದ ಗುರುಸ್ವಾಮಿ ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿದರು. ಈ ಮೂಲಕ ನೋವಿನಿಂದ ನರಳುತ್ತಿದ್ದ ತನ್ನ ಪ್ರೇಮಿಗೆ ಸಾಂತ್ವನ ನೀಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರಕ್ಕೆ ಮುಜುಗರ ತಂದಿಟ್ಟ ಬೆನ್ನಲ್ಲೇ ಬಿಆರ್ ಪಾಟೀಲ್ ಗೆ ಸಿಎಂ ಬುಲಾವ್

ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಗಮನಿಸಿ, ಇನ್ಮೇಲೆ ಹೊಸ ರೂಲ್ಸ್

ಇರಾನ್ ಪ್ರತೀಕಾರದ ಕಿಚ್ಚು: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪಕ್ಕಾ

ಇರಾನ್ ನ ಸರ್ವನಾಶಕ್ಕೆ ಕಾರಣವಾಗಿದ್ದು ಒಬ್ಬ ಮಹಿಳೆ, ಯಾರೀಕೆ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ನಗಲೂ ಆಗದ ಅಳಲೂ ಆಗದ ಸ್ಥಿತಿ

ಮುಂದಿನ ಸುದ್ದಿ
Show comments