Webdunia - Bharat's app for daily news and videos

Install App

ಬಳ್ಳಾರಿ ಹೊರವಲಯದಲ್ಲಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Webdunia
ಗುರುವಾರ, 21 ಆಗಸ್ಟ್ 2014 (11:51 IST)
ಬಳ್ಳಾರಿಯ ಹೊಲವಲಯದಲ್ಲಿ ಅನ್ಯಕೋಮುಗಳಿಗೆ ಸೇರಿದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.  ಪಿಐಟಿಎಂ ಇಂಜಿನಿಯರಿಂಗ್ ಕಾಲೇಜಿನ ಬಳಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಬ್ಬರ ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರಿಬ್ಬರ ಮೃತದೇಹಗಳನ್ನು ನಾಯಿ, ನರಿಗಳು ತಿಂದು ಬಿಟ್ಟು ಮೂಳೆಯ ಅವಶೇಷಗಳು ಮಾತ್ರ ಸಿಕ್ಕಿದೆ.

 ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರಿಬ್ಬರೂ ಬಳ್ಳಾರಿಯ ಕೌಲ್ ಬಜಾರ್ ನಿವಾಸಿಗಳು. ಆಗಸ್ಟ್ 4ರಂದು ತಮ್ಮ ಪುತ್ರಿ ಸಮತಾ ಕಾಣೆಯಾದ ಬಳಿಕ ತಮ್ಮ ಪುತ್ರಿಯನ್ನು ಇಮ್ತಿಯಾಜ್  ಅಪಹರಿಸಿದ್ದಾನೆ ಎಂದು ಅವಳ ಪೋಷಕರು ಪೊಲೀಸರಿಗೆ ದೂರು ನೀಡಿದರು.

ಸಮತಾಳ ಅಣ್ಣ ರಾಜೇಶ್ ಸಹಪಾಠಿಯಾಗಿದ್ದ ಇಮ್ತಿಯಾಜ್ ಕಳೆದ 6 ವರ್ಷಗಳಿಂದ ಸಮತಾಳನ್ನು ಪ್ರೀತಿಸುತ್ತಿದ್ದ. ಸಮತಾ ಬಳ್ಳಾರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಇವರಿಬ್ಬರೂ ಬೇರೆ, ಬೇರೆ ಕೋಮಿಗೆ ಸೇರಿದ್ದರಿಂದ ತಂದೆ, ತಾಯಿಗಳ ವಿರೋಧವೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿರಬಹುದೆಂದು ಶಂಕಿಸಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments