Select Your Language

Notifications

webdunia
webdunia
webdunia
webdunia

ಲಾಟರಿ ಹಗರಣ: ಆರೋಪಿ ಪರಿರಾಜನ್ ಮತ್ತೆ ನ್ಯಾಯಾಂಗ ಬಂಧನಕ್ಕೆ

ಲಾಟರಿ ಹಗರಣ: ಆರೋಪಿ ಪರಿರಾಜನ್ ಮತ್ತೆ ನ್ಯಾಯಾಂಗ ಬಂಧನಕ್ಕೆ
ಕೋಲಾರ , ಶುಕ್ರವಾರ, 29 ಮೇ 2015 (14:56 IST)
ಬಹಕೋಟಿ ಲಾಟರಿ ಹಗರಣದಲ್ಲಿ ಮುಖ್ಯ ಆರೋಪಿಯಾಗಿರುವ ಪಾರಿರಾಜನ್‌ನನ್ನು ಜಿಲ್ಲೆಯ ಬಂಗಾರಪೇಟೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಂದು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯು ಮುಂದಿನ ಮುನ್ಸೂಚನೆ ನೀಡುವವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಲಿ ಎಂದು ಆದೇಶಿಸಿದರು. 
 
ಇನ್ನು ಪ್ರಕಱಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿಯನ್ನು ನ್ಯಾಯಾಲಯವೇ ಕಳೆದ ಮೇ 8ರಂದು ಪೊಲೀಸ್ ಕಸ್ಟಡಿಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ತನಿಖಾ ಸಂಸ್ಥೆಯಾದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ತನಿಖೆ ನಡೆಸುತ್ತಿದ್ದರು.  
 
ಇನ್ನು ಈತ ಪ್ರಮುಖ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು, ಕೋಲಾರದ ಉಪ ಕಾರಾಗೃಹದಲ್ಲಿಟ್ಟಿದ್ದರು.  ಆದರೆ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬ ಕಾರಣದಿಂದ ಮತ್ತೆ ಬೆಂಗಳೂರಿನ ಅಗ್ರಹಾರ ಜೈಲಿಗೆ ಕರೆತರಲಾಗಿತ್ತು. 

Share this Story:

Follow Webdunia kannada