Webdunia - Bharat's app for daily news and videos

Install App

ಲೋಕಾಯುಕ್ತ ನೇಮಕ ವಿಚಾರ ಹಾದಿ, ಬೀದಿಯಲ್ಲಿ ಮಾತನಾಡಬಾರದು: ದೇವೇಗೌಡ

Webdunia
ಗುರುವಾರ, 14 ಜನವರಿ 2016 (14:15 IST)
ರಾಜ್ಯದಲ್ಲಿ ಲೋಕಾಯುಕ್ತರ ನೇಮಕ ವಿಚಾರವಾಗಿ ಹಾದಿ ಬೀದಿಯಲ್ಲಿ ಮಾತನಾಡಬಾರದು ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಸಾಕಷ್ಟು ಮಂದಿ ನ್ಯಾಯಮೂರ್ತಿಗಳಿದ್ದಾರೆ. ಆದರೆ ಬಿಜೆಪಿ ವಿಕ್ರಂ ಜಿತ್ ಸೇನ್ ಅವರು ತಮಗೆ ಲೋಕಾಯುಕ್ತ ಹುದ್ದೆಯ ಕುರಿತು ಒಲವು ತೋರದಿದ್ದರೂ ಅವರ ಹೆಸರನ್ನೇ ಬಿಜೆಪಿ ಸೂಚಿಸುತ್ತಿದೆ. ಬಿಜೆಪಿಗೆ ವಿಕ್ರಂಜಿತ್ ಸೇನ್ ಅವರೇ ಏಕೆ ಬೇಕು ಎಂದು ದೇವೇಗೌಡರು ಪ್ರಶ್ನಿಸಿದರು.  ನ್ಯಾ. ಎಸ್. ಆರ್. ನಾಯಕ್ ವಿರುದ್ಧ ಆರೋಪಗಳ ದೂರು ಕೇಳಿಬಂದಿದ್ದರೂ ಕಾಂಗ್ರೆಸ್ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನೇ ಶಿಫಾರಸು ಮಾಡಲು ಮುಂದಾಗಿದೆ ಎಂದು ಗೌಡರು ಹೇಳಿದರು. 

ಮೂರು ವಿದಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ  ಮಾತನಾಡಿದ ದೇವೇಗೌಡರು ಎರಡೂ ರಾಜಕೀಯ ಪಕ್ಷಗಳು ಆರ್ಥಿಕವಾಗಿ ಸಬಲವಾಗಿವೆ.  ಆದರೆ ನಮ್ಮ ಬಳಿ ಹಣವಿಲ್ಲದಿರುವುದರಿಂದ ಹಣವಂತರನ್ನು ಆಯ್ಕೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದರು.  ಆದರೆ ಸರ್ಕಾರದಂತೆ ನಮ್ಮಿಂದ ಪ್ಯಾಕೇಜ್ ಕೊಡಲು ಸಾಧ್ಯವಿಲ್ಲ. ನಾವು ಮಾಡಿದ ಕೆಲಸ ನೋಡಿಯೇ ಜನತೆ ಮತ ಹಾಕಬೇಕು ಎಂದು ದೇವೇಗೌಡರು ಅಭಿಪ್ರಾಯಪಟ್ಟರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments