Select Your Language

Notifications

webdunia
webdunia
webdunia
webdunia

ಬಿಎಸ್‌ವೈ ವಿರುದ್ದ ಸಿರಾಜುದ್ದೀನ್ ಬಾಷಾ ದೂರುಗಳು ರದ್ದು: ಲೋಕಾಯುಕ್ತ ಕೋರ್ಟ್ ಆದೇಶ

ಬಿಎಸ್‌ವೈ ವಿರುದ್ದ ಸಿರಾಜುದ್ದೀನ್ ಬಾಷಾ ದೂರುಗಳು ರದ್ದು: ಲೋಕಾಯುಕ್ತ ಕೋರ್ಟ್ ಆದೇಶ
ಬೆಂಗಳೂರು , ಸೋಮವಾರ, 30 ನವೆಂಬರ್ 2015 (17:40 IST)
ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ  ಸಿರಾಜುದ್ದೀನ್ ಬಾಷಾ ಸಲ್ಲಿಸಿದ್ದ ನಾಲ್ಕು ದೂರುಗಳನ್ನು ರದ್ದು ಮಾಡಿ ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ನೀಡಿದೆ. 
 
ಗವರ್ನರ್  ಪ್ರಾಸಿಕ್ಯೂಷನ್‌ಗೆ ನೀಡಿದ್ದ  ಅನುಮತಿಯನ್ನು ಹೈಕೋರ್ಟ್ ರದ್ದು ಮಾಡಿರುವುದರಿಂದ ಬಿಎಸ್‌ವೈ ವಿರುದ್ಧ ಸಿರಾಜಿನ್ ಬಾಷಾ ಸಲ್ಲಿಸಿದ್ದ ದೂರುಗಳನ್ನು ರದ್ದು ಮಾಡುವಂತೆ ಕೋರಿ ಬಿಎಸ್‌ವೈ ವಕೀಲರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.  ಬಿಎಸ್‌ವೈ ಪಾಸ್‌ಪೋರ್ಟ್ ವಾಪಸ್ ಮಾಡುವಂತೆಯೂ ಸೂಚಿಸಲಾಗಿದೆ. 
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಬಿಎಸ್‌ವೈ ವಿರುದ್ಧ ಹಲವು ಡಿನೋಟಿಫಿಕೇಶನ್ ಕೇಸ್‌ಗಳು ಇದ್ದವು. ಸಿರಾಜಿನ್ ಬಾಷಾ ಯಡಿಯೂರಪ್ಪನವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಖಾಸಗಿ ದೂರುಗಳನ್ನು ಸಲ್ಲಿಸಿದ್ದರು. ಈ ಕುರಿತು ತನಿಖೆ ಮಾಡುವಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರು.  ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಕುರಿತು ನೀಡಿದ್ದ ಅನುಮತಿ ರದ್ದುಮಾಡಿತ್ತು.   

Share this Story:

Follow Webdunia kannada