Webdunia - Bharat's app for daily news and videos

Install App

ಲೋಕಾಯುಕ್ತ ಪೊಲೀಸರಿಗೆ ಭಾರಿ ಭ್ರಷ್ಟ ತಿಮಿಂಗಿಲ ವಶಕ್ಕೆ

Webdunia
ಭಾನುವಾರ, 28 ಸೆಪ್ಟಂಬರ್ 2014 (13:49 IST)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ವಿಭಾಗೀಯ ಕಚೇರಿ ಹಾಗೂ ವಸತಿಗೃಹದ ಮೇಲೆ ಮಧ್ಯಾಹ್ನ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಒಟ್ಟು 4.35 ರೂ. ಲಕ್ಷ ವಶಪಡಿಸಿಕೊಂಡು ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
 
ಲೋಕಾಯುಕ್ತ ಎಸ್‌ಪಿ ಡಾ.ವೇದಮೂರ್ತಿ ನೇತೃತ್ವದ ತಂಡ ಮೊದಲು ಬಿ.ಎಂ. ರಸ್ತೆಯಲ್ಲಿರುವ ಕೆಎಸ್ಆರ್‌ಟಿಸಿ ವಿಭಾಗೀಯ ಕಚೇರಿ ಮೇಲೆ ದಾಳಿ ನಡೆಸಿತು. ಅಲ್ಲಿಂದ 55 ಸಾವಿರ ವಶಕ್ಕೆ ತೆಗೆದುಕೊಂಡು ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ವೆಂಕಟೇಶ್ವರ ರೆಡ್ಡಿ ಅವರು ಉಳಿದುಕೊಂಡಿರುವ ಅತಿಥಿಗೃಹದ ಕೊಠಡಿಯ ತಪಾಸಣೆ ನಡೆಸಿದಾಗ ಅಲ್ಲಿ 3 ಲಕ್ಷ ನಗದು ಲಭಿಸಿತ್ತು. ಇದಲ್ಲದೆ ಅವರ ಕಾರಿನಿಂದಲೂ 80 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
 
‘ಎಂಟು ತಿಂಗಳ ಹಿಂದೆ ಇಲ್ಲಿಗೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿದ್ದ ರೆಡ್ಡಿ, ಚಾಲಕರು ಮತ್ತು ನಿರ್ವಾಹಕರಿಂದಲೇ ಲಂಚದ ಬೇಡಿಕೆ ಇಡುತ್ತಿದ್ದರು ಎಂಬ ದೂರು ಬಂದ ಕಾರಣ ದಾಳಿ ನಡೆಸಿದ್ದೇವೆ’ ಎಂದು ಲೋಕಾಯುಕ್ತ ಎಸ್‌ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments